ಕಾಯಂ ಭೂಸ್ವಾಧೀನ ಅಧಿಕಾರಿ ಇಲ್ಲ
2005ರಲ್ಲಿ ಪ್ರಾರಂಭವಾದ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಸರ್ಕಾರ ಕಾಯಂ ಅಧಿಕಾರಿ ನೇಮಿಸದೇ ತಹಶೀಲ್ದಾರರು ಉಪ ವಿಭಾಗಾಧಿಕಾರಿಗಳಿಗೆ ಕಾರ್ಯಭಾರ ವಹಿಸಿದೆ. 18 ವರ್ಷಗಳಲ್ಲಿ 23 ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಇದರಲ್ಲಿ 18 ಅಧಿಕಾರಿಗಳು ಪ್ರಭಾರ 5 ಜನ ಮಾತ್ರ ಕಾಯಂ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ಕಚೇರಿಯಲ್ಲಿ ಶಿರಸ್ತೇದಾರ ಗುಮಾಸ್ತರು ಮೋಜಣಿದಾರರ ಹುದ್ದೆಗಳೆಲ್ಲ ಖಾಲಿ ಇವೆ. ಭೂಸ್ವಾಧೀನ ಕಡತಗಳು ನಿಯಮಾನುಸಾರ ಒಂದು ವರ್ಷದ ಅವಧಿಯೊಳಗೆ ಅನುಮೋದನೆಗೊಳ್ಳಬೇಕು. ವಿಳಂಬವಾದಲ್ಲಿ ಅವು ಅಸಿಂಧುಗೊಳ್ಳುತ್ತವೆ. ಕಾಯಂ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದ್ದು ಸರ್ಕಾರ ಕೂಡಲೇ ಕಾಯಂ ಅಧಿಕಾರಿ ನೇಮಿಸಬೇಕಿದೆ.