ಇದೇ ವೇಳೆ ಸಚಿವ ಎಂ.ಬಿ.ಪಾಟೀಲಗೆ ಕಾರಜೋಳದ ಪಾಂಡು ಜಾಧವ ಬೆಳ್ಳಿ ಕಿರೀಟ ತೊಡಿಸಿದರೆ, ಪರಸಪ್ಪ ಹಳಿಜೋಳ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಬಾಡಗಿ ಶಿವಯ್ಯ ಸ್ವಾಮೀಜಿ, ಜಿ.ಪಂ.ಸದಸ್ಯರಾದ ಉಮೇಶ ಕೋಳಕೂರ, ಸುಜಾತಾ ಕಳ್ಳಿಮನಿ, ಭೂ ದಾನಿ ಲಕ್ಷ್ಮೀಬಾಯಿ ನಾಗರಾಳ, ಟಿ.ಕೆ.ಹಂಗರಗಿ, ಜ್ಯೋತಿ ದೇಸಾಯಿ, ವಿ.ಎಸ್.ಪಾಟೀಲ, ಸಂಗಮೇಶ ಬಬಲೇಶ್ವರ ಉಪಸ್ಥಿತರಿದ್ದರು. ಸೋಮನಾಥ ಕಳ್ಳಿಮನಿ ಸ್ವಾಗತಿಸಿದರು. ಬಿ.ಡಿ.ಆಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.