ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಎನ್ನ ಗುರು ಲಚ್ಯಾಣದ ಲಿಂಗೈಕ್ಯ ಸಿದ್ಧಲಿಂಗ ಮಹಾರಾಜರ ಶಕ್ತಿ ದೊಡ್ಡದು. ನಾನು ಎದೆ ತಟ್ಟಿ ಹೇಳುತ್ತೇನೆ. ಗುರುಗಳನ್ನು ಮನಸ್ಸು ಬಿಚ್ಚಿ ನೋಡಿರಿ, ಶುದ್ಧವಾದ ಭಾವನೆಯಿಂದ ನೋಡಿರಿ. ನೀವು ಭಕ್ತಿಯಿಂದ ಬೇಡಿ ನಿಮ್ಮ ಮನೆ ಮನೆ ತಲುಪುವುದರೊಳಗಾಗಿ ಆಶೀರ್ವಾದ ಮಾಡುವ ಶಕ್ತಿ ಆತನಲ್ಲಿದೆ ಎಂದು ತಿಳಿಸಿದರು.