ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲ ಐ.ಎಲ್.ಪಾಟೀಲ ಜೆಡಿಎಸ್‌ ಸೇರ್ಪಡೆ

Last Updated 5 ಡಿಸೆಂಬರ್ 2022, 7:48 IST
ಅಕ್ಷರ ಗಾತ್ರ

ವಿಜಯಪುರ: ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಂದಗಿ ಮತಕ್ಷೇತ್ರದ ಟಿಕೆಟ್‌ ಅಕಾಂಕ್ಷಿ ಹಿರಿಯ ವಕೀಲ ಐ.ಎಲ್. ಪಾಟೀಲ ಪಕ್ಷಕ್ಕೆ ಸೇರ್ಪಡೆಯಾದರು.

ಹಲವಾರು ಸಾಮಾಜಿಕ ಕಾರ್ಯಗಳನ್ನು ಸಿಂದಗಿ ಮತಕ್ಷೇತ್ರದಲ್ಲಿ ಮಾಡುತ್ತಾ ಬಂದಿದ್ದು, ನನ್ನ ಪರವಾಗಿ ಮತಕ್ಷೇತ್ರದಲ್ಲಿ ಜನತೆ ಒಲವು ವ್ಯಕ್ತಪಡಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷವಾದ ಜನತಾದಳದ ಅಕಾಂಕ್ಷಿಯಾದ ನನಗೆ ಪಕ್ಷವು ಟಿಕೆಟ್‌ ನೀಡುವ ಭರವಸೆ ನೀಡಿದೆ ಎಂದು ಐ.ಎಲ್. ಪಾಟೀಲ ಹೇಳಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಸಿಂದಗಿ ಮತಕ್ಷೇತ್ರದಲ್ಲಿ ಜಾತ್ಯತೀತ ಜನತಾದಳವು ತನ್ನದೆಯಾದ ಪ್ರಾಬಲ್ಯ ಹೊಂದಿದೆ. ಮತಕ್ಷೇತ್ರದಲ್ಲಿ ಹಿಂದಿನ ಜೆಡಿಎಸ್ ಸರ್ಕಾರವು ಮಾಡಿದ ಅಭಿವೃದ್ದಿ ಕಾರ್ಯಗಳು ಈ ಬಾರಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಹುಸೇನ ಬಾಗಾಯತ, ಜಿಲ್ಲಾ ಎಸ್.ಸಿ.ಎಸ್.ಟಿ.ಅಧ್ಯಕ್ಷ ಸುಭಾಸ ನಾಯಕ, ತಾಲ್ಲೂಕು ಅಧ್ಯಕ್ಷ ನಿಂಗನಗೌಡ ಸೋಲಾಪುರ, ರಜಾಕ ಬಿಜಾಪೂರ, ಎ.ಎಂ.ಲೋಗಾಂವ, ಎಂ.ಎಂ. ಅವಟಿ, ಬಿ.ಸಿ. ರೇವೂರ, ಜಿ.ಎಸ್. ಆಲಗೂರ, ವಿ.ಎಸ್. ಪಾಟೀಲ, ಉಸ್ಮಾನ ಆಲಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT