ಪ್ರತಿಮೆಯ ಜಾಗದಲ್ಲಿ ಭಾವಚಿತ್ರವನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದೆ. ಪುನಃ ಪ್ರತಿಮೆಯ ಪ್ರತಿಷ್ಠಾಪನೆಗೆ ನಿರ್ಧರಿಸಲಾಗಿದ್ದು, ಗ್ರಾಮದ ಯುವಕರೆಲ್ಲರೂ ಸೇರಿ, ₹ 25,000 ಹಣ ಸೇರಿಸಿದ್ದು, ಮುಂದಿನ ದಿನಗಳಲ್ಲಿ ಬಸವಣ್ಣನವರ ಕುಳಿತ ಭಂಗಿಯ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಎಂದು ಗ್ರಾಮದ ಯುವ ಧುರೀಣರಾದ ಶೇಖರಗೌಡ ಪಾಟೀಲ, ಭೀಮನಗೌಡ ಸಿದರಡ್ಡಿ, ಸಂಗಮೇಶ ಛಾಯಾಗೋಳ, ಸೋಮಶೇಖರ ಹಿರೇಮಠ ತಿಳಿಸಿದರು.