ಚಿಕ್ಕವರಿದ್ದಾಗಿನಿಂದಲೂ ದೈಹಿಕ ಕಸರತ್ತಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಇವರು, ಯುವಕರಿದ್ದಾಗ, ಜಾತ್ರೆ, ಹಬ್ಬ ಹರಿದಿನಗಳಲ್ಲಿ ನಾನಾ ಕಡೆ ಏರ್ಪಡಿಸುತ್ತಿದ್ದ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ಮುಂದೆ ಹೊಟ್ಟೆಪಾಡಿಗಾಗಿ ದುಬೈಗೆ ದುಡಿಯಲು ಹೋದರೂ ಅಲ್ಲಿಯೂ ದೈಹಿಕ ಕಸರತ್ತು ಮುಂದುವರೆಸಿದ್ದರು. ಅಲ್ಲಿಂದ ಬಂದು ನಿಡಗುಂದಿಯಲ್ಲಿ ಕಳೆದ 8 ವರ್ಷಗಳಿಂದ ಗೋಲ್ಡನ್ ಜಿಮ್ ತೆರೆದು ಯುವಕರಿಗೆ ತರಬೇತಿ ನೀಡುತ್ತಿದ್ದಾರೆ.