ಈ ಕುರಿತು ಮಾಹಿತಿ ನೀಡಿದಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಜಿಲ್ಲೆಯಿಂದ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರತಿದಿನ ನೂರಾರು ಬಸ್ಗಳು ಸಂಚರಿಸುತ್ತಿವೆ. ಸಾವಿರಾರು ಜನರು ಪ್ರಯಾಣಿಸುತ್ತಾರೆ. ಟಿಕೆಟ್ ಮೇಲೆ ಮುದ್ರಿಸಿರುವ ಕೋವಿಡ್ ಜಾಗೃತಿ ಸಂದೇಶವನ್ನು ಪ್ರತಿಯೊಬ್ಬರೂ ಓದುತ್ತಾರೆ. ಇದರಿಂದ ಜನರನ್ನು ಎಚ್ಚರಿಸಬಹುದಾಗಿ ಎಂದು ಹೇಳಿದರು.