<p><strong>ವಿಜಯಪುರ: </strong>ಜಿಲ್ಲೆಯಲ್ಲಿ ಭೂಕಂಪನ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ ಹೇಳಿದರು.</p>.<p>ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ, ಹುಬನೂರ ಮತ್ತು ಸಿದ್ಧಾಪೂರ ಕೆ. ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸದ ನಂತರ ಅವರು ಮಾತನಾಡಿದರು.</p>.<p>ಜಿಲ್ಲೆಯ ಕೋಲ್ಹಾರ ತಾಲ್ಲೂಕಿನ ಮಲಘಾಣ, ಮಸೂತಿ ಬಬಲೇಶ್ವರ ತಾಲ್ಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲ್ಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ವ್ಯಾಪ್ತಿಯಲ್ಲಿ ಭೂಮಿಯೊಳಗೆ ಭಾರೀ ಸ್ಪೋಟದ ಶಬ್ಧಗಳು ಬರುತ್ತಿರುವ ಪರಿಶೀಲನೆ ನಡೆಸಲಾಗಿದೆ ಎಂದರು.</p>.<p>ಜಿಲ್ಲೆಯು ಅತೀ ಕಡಿಮೆ ಭೂಕಂಪನದ ವಲಯದಲ್ಲಿ ಬರುವುದರಿಂದ ಇಲ್ಲಿ ಯಾವುದೇ ಭೂಕಂಪನದ ಸಾಧ್ಯತೆ ಇರುವುದಿಲ್ಲ. ಗ್ರಾಮಸ್ಥರ ಮಾಹಿತಿಯನುಸಾರ ಭೂಮಿಯಲ್ಲಿ ಈ ಶಬ್ಧವು ಮಳೆಗಾಲದಲ್ಲಿ ಮಾತ್ರ ಬರುತ್ತಿರುವುದರಿಂದ ಮಳೆ ನೀರು, ಅಂತರ್ಜಲ ತಲುಪುವ ಸಂದರ್ಭದಲ್ಲಿ ರಾಸಾಯನಿಕಗಳ ಸಮೀಕರಣದಿಂದ ಮತ್ತು ಭೂಮಿ ಪದರುಗಳಲ್ಲಿ ನೀರಿನ ಒತ್ತಡದಿಂದಾಗಿ ಇಂತಹ ಶಬ್ಧಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದರು.</p>.<p>ಆಲಮಟ್ಟಿ ವ್ಯಾಪ್ತಿಯಲ್ಲಿ ಭೂಕಂಪನ ಮಾಪನ ಉಪಕರಣವನ್ನು ಅಳವಡಿಸಲಾಗಿದ್ದು, 200 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ವರದಿ ದಾಖಲಾಗುತ್ತದೆ. ಅದರಂತೆ, ರಾಜ್ಯದಲ್ಲಿ ಒಟ್ಟು 14 ಇಂತಹ ಭೂಕಂಪನ ಮಾಪನಾ ಕೇಂದ್ರಗಳು ಸಹ ಉಪಗ್ರಹ ಆಧಾರಿತ ಮಾಹಿತಿ ನೀಡುತ್ತಿದ್ದು, ಜಿಲ್ಲೆಯ ಈ ಭಾಗಗಳಲ್ಲಿ ಆದ ಭೂಕಂಪನದ ಬಗ್ಗೆ ಯಾವುದೇ ವರದಿ ದಾಖಲಾಗಿರುವುದಿಲ್ಲ ಎಂದರು.</p>.<p>ಜಿಲ್ಲೆಯ ಜನತೆ ಹಾಗೂ ಸಂಬಂಧಪಟ್ಟ ಗ್ರಾಮಸ್ಥರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನಿರ್ಭಿತಿಯಿಂದ ಇರುವಂತೆ ತಿಳಿಸಿದರು.</p>.<p>ಅಧಿಕಾರಿಗಳ ತಂಡವು ಗ್ರಾಮಸ್ಥರಿಗೆ ವಿಡಿಯೊ ಮೂಲಕ ವೈಜ್ಞಾನಿಕ ಮಾಹಿತಿ ಮತ್ತು ಶಬ್ಧದ ಮೂಲ ಕಾರಣಗಳ ಬಗ್ಗೆ ಮನವರಿಕೆ ಮಾಡಿದರು.</p>.<p>ಭೂಮಿಯಲ್ಲಿ ಮಳೆಗಾಲದಲ್ಲಿ ಅಂತರ್ಜಲಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಿಂದ ಈ ಶಬ್ಧಗಳು ಕೇಳಿಬರುತ್ತಿದ್ದು, ನವೆಂಬರ್ ಅಥವಾ ಡಿಸೆಂಬರ್ ಅಂತ್ಯಕ್ಕೆ ಕಡಿಮೆಯಾಗುವ ಸಾಧ್ಯತೆ ಇದೆ. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಈ ಶಬ್ಧಗಳು ಬರದೇ ಇರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಲಭ್ಯವಾಗಿದ್ದು, ಮಳೆಗಾಲದ ನಂತರ ತನ್ನಿಂದ ತಾನೇ ಈ ಶಬ್ಧ ಕ್ಷೀಣಿಸಲಿದೆ ಎಂದು ಮನವರಿಕೆ ಮಾಡಿದರು.</p>.<p>ಈ ಭಾಗದ ಗ್ರಾಮಗಳ ಮೇಲೆ ತಜ್ಞರ ತಂಡವು ನಿರಂತರ ನಿಗಾ ಇಡಲಿದೆ ಎಂದು ಹೇಳಿದರು.</p>.<p>ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ ದಿಕ್ಪಾಲ್, ತಹಶೀಲ್ದಾರ್ ಮ್ಯಾಗೇರಿ, ಗಣಿ ಮತ್ತು ಕಿರಿಯ ವೈಜ್ಞಾನಿಕ ಅಧಿಕಾರಿ ಕೆ.ಕೆ ಅಭಿನಯ ಹಾಗೂ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>---</p>.<p>ವಿಜಯಪುರ ಜಿಲ್ಲಾಡಳಿತದಿಂದ ಭೂಕಂಪನ ಮಾಪನಾ ಕೇಂದ್ರ ಸ್ಥಾಪನೆ ಕುರಿತು ಶಿಫಾರಸು ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು<br />ಜಗದೀಶ,ವೈಜ್ಞಾನಿಕ ಅಧಿಕಾರಿ,ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಜಿಲ್ಲೆಯಲ್ಲಿ ಭೂಕಂಪನ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ ಹೇಳಿದರು.</p>.<p>ತಿಕೋಟಾ ತಾಲ್ಲೂಕಿನ ಸೋಮದೇವರಹಟ್ಟಿ, ಹುಬನೂರ ಮತ್ತು ಸಿದ್ಧಾಪೂರ ಕೆ. ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸದ ನಂತರ ಅವರು ಮಾತನಾಡಿದರು.</p>.<p>ಜಿಲ್ಲೆಯ ಕೋಲ್ಹಾರ ತಾಲ್ಲೂಕಿನ ಮಲಘಾಣ, ಮಸೂತಿ ಬಬಲೇಶ್ವರ ತಾಲ್ಲೂಕಿನ ಅಡವಿ ಸಂಗಾಪೂರ ಮತ್ತು ತಿಕೋಟಾ ತಾಲ್ಲೂಕಿನ ಸೋಮದೇವರ ಹಟ್ಟಿ, ಮಲಕನದೇವರಹಟ್ಟಿ, ಹುಬನೂರ ವ್ಯಾಪ್ತಿಯಲ್ಲಿ ಭೂಮಿಯೊಳಗೆ ಭಾರೀ ಸ್ಪೋಟದ ಶಬ್ಧಗಳು ಬರುತ್ತಿರುವ ಪರಿಶೀಲನೆ ನಡೆಸಲಾಗಿದೆ ಎಂದರು.</p>.<p>ಜಿಲ್ಲೆಯು ಅತೀ ಕಡಿಮೆ ಭೂಕಂಪನದ ವಲಯದಲ್ಲಿ ಬರುವುದರಿಂದ ಇಲ್ಲಿ ಯಾವುದೇ ಭೂಕಂಪನದ ಸಾಧ್ಯತೆ ಇರುವುದಿಲ್ಲ. ಗ್ರಾಮಸ್ಥರ ಮಾಹಿತಿಯನುಸಾರ ಭೂಮಿಯಲ್ಲಿ ಈ ಶಬ್ಧವು ಮಳೆಗಾಲದಲ್ಲಿ ಮಾತ್ರ ಬರುತ್ತಿರುವುದರಿಂದ ಮಳೆ ನೀರು, ಅಂತರ್ಜಲ ತಲುಪುವ ಸಂದರ್ಭದಲ್ಲಿ ರಾಸಾಯನಿಕಗಳ ಸಮೀಕರಣದಿಂದ ಮತ್ತು ಭೂಮಿ ಪದರುಗಳಲ್ಲಿ ನೀರಿನ ಒತ್ತಡದಿಂದಾಗಿ ಇಂತಹ ಶಬ್ಧಗಳು ಬರುವ ಸಾಧ್ಯತೆ ಇದೆ ಎಂದು ಹೇಳಿದರು.</p>.<p>ಆಲಮಟ್ಟಿ ವ್ಯಾಪ್ತಿಯಲ್ಲಿ ಭೂಕಂಪನ ಮಾಪನ ಉಪಕರಣವನ್ನು ಅಳವಡಿಸಲಾಗಿದ್ದು, 200 ಕಿ.ಮೀ ವ್ಯಾಪ್ತಿಯಲ್ಲಿ ಭೂಕಂಪನದ ವರದಿ ದಾಖಲಾಗುತ್ತದೆ. ಅದರಂತೆ, ರಾಜ್ಯದಲ್ಲಿ ಒಟ್ಟು 14 ಇಂತಹ ಭೂಕಂಪನ ಮಾಪನಾ ಕೇಂದ್ರಗಳು ಸಹ ಉಪಗ್ರಹ ಆಧಾರಿತ ಮಾಹಿತಿ ನೀಡುತ್ತಿದ್ದು, ಜಿಲ್ಲೆಯ ಈ ಭಾಗಗಳಲ್ಲಿ ಆದ ಭೂಕಂಪನದ ಬಗ್ಗೆ ಯಾವುದೇ ವರದಿ ದಾಖಲಾಗಿರುವುದಿಲ್ಲ ಎಂದರು.</p>.<p>ಜಿಲ್ಲೆಯ ಜನತೆ ಹಾಗೂ ಸಂಬಂಧಪಟ್ಟ ಗ್ರಾಮಸ್ಥರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನಿರ್ಭಿತಿಯಿಂದ ಇರುವಂತೆ ತಿಳಿಸಿದರು.</p>.<p>ಅಧಿಕಾರಿಗಳ ತಂಡವು ಗ್ರಾಮಸ್ಥರಿಗೆ ವಿಡಿಯೊ ಮೂಲಕ ವೈಜ್ಞಾನಿಕ ಮಾಹಿತಿ ಮತ್ತು ಶಬ್ಧದ ಮೂಲ ಕಾರಣಗಳ ಬಗ್ಗೆ ಮನವರಿಕೆ ಮಾಡಿದರು.</p>.<p>ಭೂಮಿಯಲ್ಲಿ ಮಳೆಗಾಲದಲ್ಲಿ ಅಂತರ್ಜಲಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆಗಳಿಂದ ಈ ಶಬ್ಧಗಳು ಕೇಳಿಬರುತ್ತಿದ್ದು, ನವೆಂಬರ್ ಅಥವಾ ಡಿಸೆಂಬರ್ ಅಂತ್ಯಕ್ಕೆ ಕಡಿಮೆಯಾಗುವ ಸಾಧ್ಯತೆ ಇದೆ. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ಈ ಶಬ್ಧಗಳು ಬರದೇ ಇರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಲಭ್ಯವಾಗಿದ್ದು, ಮಳೆಗಾಲದ ನಂತರ ತನ್ನಿಂದ ತಾನೇ ಈ ಶಬ್ಧ ಕ್ಷೀಣಿಸಲಿದೆ ಎಂದು ಮನವರಿಕೆ ಮಾಡಿದರು.</p>.<p>ಈ ಭಾಗದ ಗ್ರಾಮಗಳ ಮೇಲೆ ತಜ್ಞರ ತಂಡವು ನಿರಂತರ ನಿಗಾ ಇಡಲಿದೆ ಎಂದು ಹೇಳಿದರು.</p>.<p>ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಕಿರಿಯ ವೈಜ್ಞಾನಿಕ ಅಧಿಕಾರಿ ರಮೇಶ ದಿಕ್ಪಾಲ್, ತಹಶೀಲ್ದಾರ್ ಮ್ಯಾಗೇರಿ, ಗಣಿ ಮತ್ತು ಕಿರಿಯ ವೈಜ್ಞಾನಿಕ ಅಧಿಕಾರಿ ಕೆ.ಕೆ ಅಭಿನಯ ಹಾಗೂ ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.</p>.<p>---</p>.<p>ವಿಜಯಪುರ ಜಿಲ್ಲಾಡಳಿತದಿಂದ ಭೂಕಂಪನ ಮಾಪನಾ ಕೇಂದ್ರ ಸ್ಥಾಪನೆ ಕುರಿತು ಶಿಫಾರಸು ಮಾಡಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು<br />ಜಗದೀಶ,ವೈಜ್ಞಾನಿಕ ಅಧಿಕಾರಿ,ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>