ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮೂರ್ತಿ ವಿಸರ್ಜನೆ: 10 ಕೆ.ಜಿ ತೂಕದ ಲಡ್ಡು ₹1.50 ಲಕ್ಷಕ್ಕೆ ಹರಾಜು

Published 22 ಸೆಪ್ಟೆಂಬರ್ 2023, 13:51 IST
Last Updated 22 ಸೆಪ್ಟೆಂಬರ್ 2023, 13:51 IST
ಅಕ್ಷರ ಗಾತ್ರ

ನಾಲತವಾಡ: ಸಮೀಪದ ಬಂಗಾರಗುಂಡ-ಕಪನೂರ ಗ್ರಾಮದ ಹೊರವಲಯದಲ್ಲಿ ಆಂಧ್ರಪ್ರದೇಶದಿಂದ ವಲಸೆ ಬಂದ ರೈತರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಮೆರವಣಿಗೆ ಗುರುವಾರ ಅದ್ಧೂರಿಯಾಗಿ ಜರುಗಿತು.

ಗಣೇಶ ಮೂರ್ತಿ ಬಳಿ ನೈವೇದ್ಯವಾಗಿ ಇಟ್ಟಿದ್ದ 10 ಕೆ.ಜಿ ತೂಕದ ಲಡ್ಡು ಅನ್ನು ₹1.50 ಲಕ್ಷಕ್ಕೆ ಹರಾಜು ಮೂಲಕ ನಿರಂಜನರಾವ್ ರೆಡ್ಡಿ ಪಡೆದುಕೊಂಡರು.

ಬಳಿಕ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ವೈಭವಯುತ ಮೆರವಣಿಗೆ ಮೂಲಕ ನಾರಾಯಣಪೂರ ಎಡದಂಡೆ ಕಾಲುವೆಯ ಹಿನ್ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.

ಮುಖಂಡರಾದ ಗುರುನಾಥ ಡಿಗ್ಗಿ, ಮುದ್ದನಗೌಡ ಮಸ್ಕಿ, ಅಂಬ್ರೇಶ ಗಂಗನಗೌಡ, ಜಿ.ಆಂಜನೇಯ, ನಾಗೇಶರಾವ, ಸುಬ್ಬಾರೆಡ್ಡಿ, ಕೋಟೇಶ್ವರ ರೆಡ್ಡಿ, ಪೆದ್ದರಾಯಡು, ಸುಬ್ಬಾರೆಡ್ಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT