<p><strong>ವಿಜಯಪುರ:</strong>‘ಯುವಕರಲ್ಲಿ ಉದಾತ್ತ ಆದರ್ಶ, ಹನುಮಂತನಲ್ಲಿದ್ದ ಸ್ವಾಮಿ ನಿಷ್ಠೆ, ದೇಶಭಕ್ತಿಯ ಗುಣವನ್ನು ಬೆಳೆಸುವ ಪ್ರತೀಕವಾಗಿ ವಿಜಯಪುರದ ಹನುಮಗಿರಿಯಲ್ಲಿ ಏ.19ರ ಶುಕ್ರವಾರ ಹನುಮದೀಕ್ಷಾ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದು ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಪಂ.ಸಂಜೀವಾಚಾರ್ಯ ಮದಬಾವಿ ತಿಳಿಸಿದರು.</p>.<p>‘ಹನುಮ ದೀಕ್ಷೆ ಪಡೆದವರ ಕೈಗೆ ಕೇಸರಿ, ಬಿಳಿ ಹಾಗೂ ಹಸಿರು ವರ್ಣದ ವಿಶೇಷ ದಾರವನ್ನು ಈ ಸಂದರ್ಭ ಕಟ್ಟಲಾಗುತ್ತದೆ’ ಎಂದು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಈಗಾಗಲೇ ನೂರಕ್ಕೂ ಹೆಚ್ಚು ಯುವಕರು ದೀಕ್ಷೆ ಪಡೆದುಕೊಳ್ಳಲು ಸಂಪರ್ಕ ಸಾಧಿಸಿದ್ದಾರೆ. 500ಕ್ಕೂ ಹೆಚ್ಚು ಯುವಕರಿಗೆ ದೀಕ್ಷೆ ನೀಡುವ ಗುರಿ ಹೊಂದಿದ್ದೇವೆ. ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲದೇ ಎಲ್ಲ ಯುವಕರಿಗೂ ದೀಕ್ಷೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಮಾತನಾಡಿದರು. ಗೋಪಾಲ ನಾಯಕ, ಪ್ರಮೋದ ಪುರಾಣಿಕ, ವಿಜಯ ಜೋಶಿ, ಪರಶುರಾಮ ಗುಮಾಸ್ತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong>‘ಯುವಕರಲ್ಲಿ ಉದಾತ್ತ ಆದರ್ಶ, ಹನುಮಂತನಲ್ಲಿದ್ದ ಸ್ವಾಮಿ ನಿಷ್ಠೆ, ದೇಶಭಕ್ತಿಯ ಗುಣವನ್ನು ಬೆಳೆಸುವ ಪ್ರತೀಕವಾಗಿ ವಿಜಯಪುರದ ಹನುಮಗಿರಿಯಲ್ಲಿ ಏ.19ರ ಶುಕ್ರವಾರ ಹನುಮದೀಕ್ಷಾ ಕಾರ್ಯಕ್ರಮ ಸಂಘಟಿಸಲಾಗಿದೆ’ ಎಂದು ಹನುಮಗಿರಿಯ ಆಧ್ಯಾತ್ಮ ವಿದ್ಯಾಶ್ರಮದ ಪಂ.ಸಂಜೀವಾಚಾರ್ಯ ಮದಬಾವಿ ತಿಳಿಸಿದರು.</p>.<p>‘ಹನುಮ ದೀಕ್ಷೆ ಪಡೆದವರ ಕೈಗೆ ಕೇಸರಿ, ಬಿಳಿ ಹಾಗೂ ಹಸಿರು ವರ್ಣದ ವಿಶೇಷ ದಾರವನ್ನು ಈ ಸಂದರ್ಭ ಕಟ್ಟಲಾಗುತ್ತದೆ’ ಎಂದು ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ಈಗಾಗಲೇ ನೂರಕ್ಕೂ ಹೆಚ್ಚು ಯುವಕರು ದೀಕ್ಷೆ ಪಡೆದುಕೊಳ್ಳಲು ಸಂಪರ್ಕ ಸಾಧಿಸಿದ್ದಾರೆ. 500ಕ್ಕೂ ಹೆಚ್ಚು ಯುವಕರಿಗೆ ದೀಕ್ಷೆ ನೀಡುವ ಗುರಿ ಹೊಂದಿದ್ದೇವೆ. ಯಾವುದೇ ಜಾತಿ, ಮತ, ಪಂಥದ ಬೇಧವಿಲ್ಲದೇ ಎಲ್ಲ ಯುವಕರಿಗೂ ದೀಕ್ಷೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.</p>.<p>ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಮಾತನಾಡಿದರು. ಗೋಪಾಲ ನಾಯಕ, ಪ್ರಮೋದ ಪುರಾಣಿಕ, ವಿಜಯ ಜೋಶಿ, ಪರಶುರಾಮ ಗುಮಾಸ್ತೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>