ಶಿವಮೊಗ್ಗದಲ್ಲಿ ಹರ್ಷ ಕೊಲೆ ಆದಾಗ ಎಲ್ಲಿ ಹೋಗಿದ್ರು ಎಂದು ಪ್ರಶ್ನಿಸಿದರು.ಸಂತೋಷ್ ಮಾಧ್ಯಮಕ್ಕೆ ಹೇಳಿಕೆ ನೀಡಿದಾಗ, ಈಶ್ವರಪ್ಪ ನನ್ನ ಬಳಿ ಡಿಮ್ಯಾಂಡ್ ಮಾಡಿಲ್ಲ ಅಂತ ಹೇಳಿದ್ರು.ಅವರ ಪಕ್ಕದಲ್ಲಿ ಇದ್ದವರು ಕಮಿಷನ್ ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ.ಈಗ ಈಶ್ವರಪ್ಪ ಬಂಧನ ಆಗಬೇಕು ಅಂತ ಹೇಳಿದ್ದಾರೆ.ಕ್ರಿಮಿನಲ್ ಕೇಸ್ ಹಾಕಬೇಕು ಅಂತ ಹೇಳಿದ್ದಾರೆ.ಹಾಗೇನಾದ್ರೂ ಆದ್ರೆ, ಕಾಂಗ್ರೆಸ್ನ ಇಡೀ ದಂಡನ್ನೇ ಜೈಲಿಗೆ ಹಾಕಬೇಕು.ವರ್ಕ್ ಆರ್ಡರ್ ಇಲ್ಲದೆ, ಎಸ್ಟಿಮೇಟ್ ಇಲ್ಲದೆ ಹೇಗೆ ಕಾಮಗಾರಿ ಮಾಡಿದ್ರು. ಅಸೆಂಬ್ಲಿಯಲ್ಲಿ ನಡೆದ ವಾಗ್ವಾದ ವೈಯಕ್ತಿಕವಾಗಿ ತೆಗೆದುಕೊಂಡುಈಗ ಬಂಧನ ಮಾಡಿಸೋವರೆಗೂ ಬಂದಿದ್ದಾರೆ.ನೋಡೋಣ ಏನು ಮಾಡ್ತಿದ್ದಾರೆ ಅನ್ನೋದು.ತನಿಖೆ ಇಂದ ಎಲ್ಲವೂ ಹೊರಗೆ ಬರಬೇಕಿದೆ ಎಂದರು.