ವಿಜಯಪುರ: ನಗರದ ಜ್ಞಾನಯೋಗಾಶ್ರಮದ ಹತ್ತಿರ ನೂತನವಾಗಿ ನಿರ್ಮಿಸಲಾದ ಬಸ್ ಟರ್ಮಿನಲ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಬುಧವಾರ ಲೋಕಾರ್ಪಣೆ ಮಾಡಿದರು.
ವಿಶೇಷ ಅಭಿವೃದ್ಧಿ ಯೋಜನೆ ಅನುದಾನದಡಿಯಲ್ಲಿ ₹ 30 ಲಕ್ಷ ವೆಚ್ಚದಲ್ಲಿಬಸ್ ಟರ್ಮಿನಲ್ನಿರ್ಮಿಸಲಾಗಿದೆ.
ಈ ನೂತನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ನಿರೀಕ್ಷಣಾ ಪ್ರಾಂಗಣ, ಸಂಚಾರ ನಿಯಂತ್ರಣ ಕೊಠಡಿ, ಬಸ್ ಪಾಸ್ ವಿತರಿಸುವ ಕೊಠಡಿ, ಒಂದು ವಾಣಿಜ್ಯ ಮಳಿಗೆ, ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಏಕಕಾಲದಲ್ಲಿ ಎರಡು ಬಸ್ಗಳು ನಿಲ್ಲಲು ಸ್ಥಳಾವಕಾಶದ ವ್ಯವಸ್ಥೆಯಿದೆ.
ಆಶ್ರಮ ನಗರ ಬಸ್ ನಿಲ್ದಾಣದಿಂದ ಪ್ರತಿದಿನ 75 ಬಸ್ಗಳು ಕಾರ್ಯಾಚರಣೆಯಾಗುತ್ತವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.