<p><strong>ಸೊಲ್ಲಾಪುರ:</strong> ಕಾವೇರಿಯಿಂದ ಗೋದಾವರಿವರೆಗೆ ವಿಸ್ತರಿಸಿದ್ದ ಕನ್ನಡನಾಡು ಭಾಷಾವಾರು ಪ್ರಾಂತಗಳ ರಚನೆಯೊಂದಿಗೆ ವಿಭಜನೆಯಾದರೂ, ಇಂದಿಗೂ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ಕನ್ನಡ ಸಂಸ್ಕೃತಿ ಜೀವಂತವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಚೆನ್ನಪ್ಪ ಅಂಗಡಿ ಹೇಳಿದರು.</p>.<p>ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ‘ಸೋಲಾಪುರ ಪ್ರದೇಶದ ಕನ್ನಡ ಸಾಹಿತ್ಯ’ ವಿಷಯ ಕುರಿತು ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತ್ಯ ಬರವಣಿಗೆ ಉತ್ತೇಜಿಸಲು ಹಾಗೂ ಪ್ರೋತ್ಸಾಹಿಸಲು ಅಕಾಡೆಮಿ ವಿಚಾರ ಸಂಕಿರಣಗಳ ಆಯೋಜನೆ, ಪ್ರಶಸ್ತಿ ಪ್ರದಾನ, ಪುಸ್ತಕ ಪ್ರಕಟಣೆ ಸೇರಿದಂತೆ ಹಲವು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.</p>.<p>ಸ್ಥಳೀಯವಾಗಿ ಕನ್ನಡ ಪುಸ್ತಕ ಪ್ರಕಟಣೆ, ಸಾಹಿತ್ಯ ಸಂವಾದಗಳು ಹಾಗೂ ಕನ್ನಡ ಪತ್ರಿಕೆಗಳ ಚಟುವಟಿಕೆಗಳು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.</p>.<p>ಸಿದ್ಧರಾಮೇಶ್ವರ ವಚನಗಳಲ್ಲಿ ಪ್ರಾದೇಶಿಕತೆ ಕುರಿತು ಭೀಮಾಶಂಕರ ಬಿರಾಜದಾರ, ಬಹುಭಾಷಾ ಬರಹಗಾರನ ಒಳನೋಟ ಕುರಿತು ಸುಮಿತ ಮೇತ್ರಿ ಹಾಗೂ ಸೋಲಾಪುರ ಪ್ರದೇಶದ ಆಧುನಿಕ ಕನ್ನಡ ಬರಹಗಾರರ ಸಾಧನೆಗಳ ಕುರಿತು ಗೀತಾ ಡಿಗ್ಗೆ ಅವರು ಪ್ರಬಂಧ ಮಂಡಿಸಿದರು.</p>.<p>ಹಿರಿಯ ಸಾಹಿತಿ ಬಿ.ಬಿ. ಪೂಜಾರಿ, ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕಾವೇರಿಸ್ವಾಮಿ, ರಾಜೇಶ್ವರಿ ಲೋಕಪುರ, ಸಾಗರ್ ಕಾಟಗಾವ, ಖಂಡಾಳ, ಯಾದವಾಡ, ಜವಳಿಗಿ, ಮಲ್ಲಿಕಾರ್ಜುನ ಪಾಟೀಲ, ಶಿವಾನಂದ ಬಳ್ಳೊಳ್ಳಿ, ಶಿವಾನಂದ ಸೋಲಾಪುರ, ಮೀನಾಕ್ಷಿ ಕೊಳ್ಳಿ, ನಿಕಿತಾ ಬಾಸ್ಕೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೊಲ್ಲಾಪುರ:</strong> ಕಾವೇರಿಯಿಂದ ಗೋದಾವರಿವರೆಗೆ ವಿಸ್ತರಿಸಿದ್ದ ಕನ್ನಡನಾಡು ಭಾಷಾವಾರು ಪ್ರಾಂತಗಳ ರಚನೆಯೊಂದಿಗೆ ವಿಭಜನೆಯಾದರೂ, ಇಂದಿಗೂ ಮಹಾರಾಷ್ಟ್ರದ ಸೊಲ್ಲಾಪುರ ಭಾಗದಲ್ಲಿ ಕನ್ನಡ ಸಂಸ್ಕೃತಿ ಜೀವಂತವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಮಂಡಳಿ ಸದಸ್ಯ ಚೆನ್ನಪ್ಪ ಅಂಗಡಿ ಹೇಳಿದರು.</p>.<p>ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ‘ಸೋಲಾಪುರ ಪ್ರದೇಶದ ಕನ್ನಡ ಸಾಹಿತ್ಯ’ ವಿಷಯ ಕುರಿತು ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತ್ಯ ಬರವಣಿಗೆ ಉತ್ತೇಜಿಸಲು ಹಾಗೂ ಪ್ರೋತ್ಸಾಹಿಸಲು ಅಕಾಡೆಮಿ ವಿಚಾರ ಸಂಕಿರಣಗಳ ಆಯೋಜನೆ, ಪ್ರಶಸ್ತಿ ಪ್ರದಾನ, ಪುಸ್ತಕ ಪ್ರಕಟಣೆ ಸೇರಿದಂತೆ ಹಲವು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದರು.</p>.<p>ಸ್ಥಳೀಯವಾಗಿ ಕನ್ನಡ ಪುಸ್ತಕ ಪ್ರಕಟಣೆ, ಸಾಹಿತ್ಯ ಸಂವಾದಗಳು ಹಾಗೂ ಕನ್ನಡ ಪತ್ರಿಕೆಗಳ ಚಟುವಟಿಕೆಗಳು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.</p>.<p>ಸಿದ್ಧರಾಮೇಶ್ವರ ವಚನಗಳಲ್ಲಿ ಪ್ರಾದೇಶಿಕತೆ ಕುರಿತು ಭೀಮಾಶಂಕರ ಬಿರಾಜದಾರ, ಬಹುಭಾಷಾ ಬರಹಗಾರನ ಒಳನೋಟ ಕುರಿತು ಸುಮಿತ ಮೇತ್ರಿ ಹಾಗೂ ಸೋಲಾಪುರ ಪ್ರದೇಶದ ಆಧುನಿಕ ಕನ್ನಡ ಬರಹಗಾರರ ಸಾಧನೆಗಳ ಕುರಿತು ಗೀತಾ ಡಿಗ್ಗೆ ಅವರು ಪ್ರಬಂಧ ಮಂಡಿಸಿದರು.</p>.<p>ಹಿರಿಯ ಸಾಹಿತಿ ಬಿ.ಬಿ. ಪೂಜಾರಿ, ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕಾವೇರಿಸ್ವಾಮಿ, ರಾಜೇಶ್ವರಿ ಲೋಕಪುರ, ಸಾಗರ್ ಕಾಟಗಾವ, ಖಂಡಾಳ, ಯಾದವಾಡ, ಜವಳಿಗಿ, ಮಲ್ಲಿಕಾರ್ಜುನ ಪಾಟೀಲ, ಶಿವಾನಂದ ಬಳ್ಳೊಳ್ಳಿ, ಶಿವಾನಂದ ಸೋಲಾಪುರ, ಮೀನಾಕ್ಷಿ ಕೊಳ್ಳಿ, ನಿಕಿತಾ ಬಾಸ್ಕೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>