ಬಸವನಬಾಗೇವಾಡಿ: ಶ್ರಾವಣ ಮಾಸ ಸೇರಿದಂತೆ ವಿವಿಧ ಹಬ್ಬ, ಹರಿದಿನಗಳು, ಜಾತ್ರೆಗಳ ಸಂದರ್ಭದಲ್ಲಿ ಪ್ರವಚನಗಳ ಮೂಲಕ ಆಧ್ಯಾತ್ಮಿಕ ಚಿಂತನೆಗಳಲ್ಲಿ ಜನರು ತೊಡಗುವಂತೆ ಮಾಡುತ್ತಿರುವ ಇಲ್ಲಿನ ಪಟ್ಟದ ಪದ್ಮರಾಜ ಒಡೆಯರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಅವರು ಕೃಷಿ ಚಟುವಟಿಕೆಯಲ್ಲೂ ತೊಡಗಿಕೊಳ್ಳುವ ಮೂಲಕ ಕೃಷಿಯ ಮಹತ್ವವನ್ನೂ ಸಾರುತ್ತಿದ್ದಾರೆ.