‘ಜ್ಯೋತಿ ಡಿ.ಎಸ್ ಮತ್ತು ಸಾಗರ ಲಮಾಣಿ ಇಬ್ಬರೂ ಫೇಸ್ಬುಕ್ ಮೂಲಕ ಪರಿಚಿತರಾಗಿದ್ದರು. ಆಕೆಯ ಮೇಲೆ ಅನುಮಾನಪಟ್ಟು ವಿಜಯಪುರಕ್ಕೆ ಕರೆಯಿಸಿಕೊಂಡು, ವಸತಿಗೃಹದಲ್ಲಿ ಉಳಿಸಿದ. ನಂತರ ಲಕ್ಷ್ಮಿಕಾಂತ ಜೊತೆ ಸೇರಿ ತಾಯಿ ಮತ್ತು ಮಗನ ಕತ್ತು ಹಿಸುಕಿ ಕೊಲೆ ಮಾಡಿದ. ಇಬ್ಬರ ಶವಗಳನ್ನು ಕಾರಿನಲ್ಲಿ ಒಯ್ದು ತಿಕೋಟಾ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಹೊಲವೊಂದರ ಬಾವಿಯಲ್ಲಿ ಎಸೆದು ಹೋಗಿದ್ದರು. ವರ್ಷದ ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.