ಗಿಡಗಂಟಿಗಳು ಬೆಳೆದು ನಿಂತು ಕುಂಟೆ ಹಾಳಾಗಿದೆ. ಮಳೆಗಾಲ ಆರಂಭ ವಾಗಿದ್ದು, ಸುತ್ತಲಿನ ಹೊಲಗದ್ದೆಗಳಲ್ಲಿ ಮಳೆಯ ನೀರು ಸಂಗ್ರಹವಾಗುತ್ತಿವೆ. ಇದರಿಂದ ರೈತರಿಗೂ ಅನಾನುಕೂಲ ವಾಗುತ್ತದೆ ಎಂದರು. ಶೀಘ್ರವಾಗಿ ಕುಂಟೆಯನ್ನು ದುರಸ್ತಿ ಮಾಡಿ, ನೀರು ಶೇಖರಣೆಯಾಗುವಂತೆ ಕ್ರಮ ಕೈಗೊಳ್ಳಬೇಕು. ನಾಗರಬಾವಿ ಕುಂಟೆಯ ಸುತ್ತಲೂ ಕಲ್ಲಿನ ತಡೆಗೋಡೆಯನ್ನು ನಿರ್ಮಾಣ ಮಾಡು ವುದರ ಜೊತೆಗೆ, ಸುತ್ತಲೂ ಜಾಲರಿ ನಿರ್ಮಾಣ ಮಾಡಬೇಕು. ಇದರಿಂದ ಅದು ಕಲ್ಯಾಣಿಯಂತೆ ಕಂಗೊಳಿಸಲಿದ್ದು ಇಲ್ಲಿ ಸಂಚರಿಸುವ ಜನರ ಮನಸ್ಸಿಗೆ ಮುದ ನೀಡಲಿದೆ ಎಂದು ಒತ್ತಾಯಿಸಿದರು.