<p><strong>ವಿಜಯಪುರ:</strong>ಶಿಕ್ಷಕರು ಮಕ್ಕಳಿಗೆ ಅಂಕ ಗಳಿಸುವುದನ್ನು ಮಾತ್ರ ಬೋಧಿಸದೇ ಜೀವನ ಪಾಠ ಹೇಳಿಕೊಡುವ, ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಹೇಳಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಂಕಗಳಿಗಷ್ಟೇ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮಕ್ಕಳ ಪ್ರತಿಭೆ, ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.</p>.<p>ತಂದೆ, ತಾಯಿಯ ನಂತರ ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮನಸ್ಸಿಟ್ಟು ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಯ ಮನಸ್ಸಿನಲ್ಲಿ ಸದಾ ಇರುತ್ತಾರೆ. ವಿದ್ಯಾರ್ಥಿಯು ಎಂತಹ ಉನ್ನತ ಸ್ಥಾನವನ್ನು ಅಲಂಕರಿಸಿದರೂ ಆ ಶಿಕ್ಷಕರನ್ನು ಮರೆಯುವುದಿಲ್ಲ ಎಂದು ಹೇಳಿದರು.</p>.<p>ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಮಾತನಾಡಿ, ದೇಶದ ಭವಿಷ್ಯ ನಿರ್ಮಿಸುವವರು ಶಿಕ್ಷಕರು. ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ. ಅಂತೆಯೇ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುವ ಕಾರ್ಯವಾಗಬೇಕಾಗಿದೆ ಎಂದರು.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ವಿ. ಹೊಸೂರು ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.</p>.<p>ಕೋವಿಡ್ ಕಾಲದಲ್ಲಿ ಕಾರ್ಯ ನಿರ್ವಹಿಸಿ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.</p>.<p>ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.</p>.<p>ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ್ ದೇಸಾಯಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಶಿವಾನಂದ ಗುಡ್ಡೋಡಗಿ, ಎಸ್.ಎಸ್ ಪಡಶೆಟ್ಟಿ, ರಾಜಶೇಖರ ಉಮರಾಣಿ, ಜಗದೀಶ, ಬಿ.ಎಚ್.ನಾಡಗೇರ, ಸಯ್ಯದ್ ಜುಬೇರ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<p>***</p>.<p>ಸರ್ಕಾರಿ ಶಾಲೆಗಳಲ್ಲಿ ಕಲಿತರೆ ಒಳ್ಳೆಯ ಭವಿಷ್ಯ ಇದೆ ಎಂಬ ಭಾವನೆಯನ್ನು ಎಲ್ಲರಲ್ಲೂ ಮೂಡಿಸುವಂತಾಗಬೇಕು<br /><strong>ಶ್ರೀಹರಿ ಗೋಳಸಂಗಿ, ಅಧ್ಯಕ್ಷ<br />ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ</strong></p>.<p>****</p>.<p class="Briefhead"><strong>ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು</strong></p>.<p>ವಿಜಯಪುರ: 2021–22ನೇ ಸಾಲಿನಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ತಲಾ ಏಳು ಜನ ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.</p>.<p>ಪ್ರಾಥಮಿಕ ಶಾಲಾ ವಿಭಾಗ: ಅರವಿಂದ ಬಿರಾದಾರ(ಬರಡೋಲ), ಅಕ್ಕಮಹಾದೇವಿ ಕಾಳೆ(ಸಿಂದಗಿ ಪಟ್ಟಣ), ಬಿ.ಎಂ.ಬಿರಾದಾರ(ಹಿರೇಬೇನೂರ), ಜೆ.ವಿ.ಮೊಟಗಿ(ಮುದ್ದಾಪುರ), ಮಲ್ಲಿಕಾರ್ಜುನ ಎಚ್.ಮಾದರ(ನಿಡೋಣಿ), ಜಿ.ಎನ್.ಹೂಗಾರ(ಮುದ್ದೇಬಿಹಾಳ), ಬಿ.ಎಸ್.ಸಜ್ಜನ(ವಿಜಯಪುರ ನಗರ).</p>.<p>ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಅರ್ಚನಾ ಕೆ.(ಯಂಕಂಚಿ), ಎಂ.ಎಸ್.ಹದ್ಲಿ(ವಿಜಯಪುರ ನಗರ), ಗಿರಿಮಲ್ಲಪ್ಪ ತರಡಿ(ಹಲಸಂಗಿ), ಕೆ.ಬಿ.ಕೊಂಗಲ್(ಅಮರಗೋಳ), ಆರ್.ಬಿ.ಸೌದಾಗರ(ಹಿರೇಮಸಳಿ), ಮಹಾದೇವಿ ಕೆ. ಪಾಟೀಲ(ಮಖಣಾಪುರ),ಚನ್ನಬಸಪ್ಪ ಬಿರಾದಾರ(ಮಣಗೂರ ಪು.ಕೆ).</p>.<p>ಪ್ರೌಢಶಾಲಾ ವಿಭಾಗ: ಪ್ರಭಾಕರ ಹಿರೇಮಠ(ಸವನಹಳ್ಳಿ), ಮುಕುಂದ ಆಲೂರ(ವಿಜಯಪುರ ನಗರ), ರಮೇಶ ನಾಯಿಕ(ಹಲಸಂಗಿ), ಅಸ್ಲಾಂ ಯಾ.ನಗಾರ್ಚಿ(ಶಿರಸ್ಯಾಡ), ರಾಜಕುಮಾರ ಮ್ಯಾಗೇರಿ(ಮೂಕಿಹಾಳ), ಪಿ.ಎಸ್.ಅಗ್ನಿ(ಚಟ್ಟರಕಿ), ಎಚ್.ಅರ್.ಬಾಲಿ(ವಿಜಯಪುರ ನಗರ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong>ಶಿಕ್ಷಕರು ಮಕ್ಕಳಿಗೆ ಅಂಕ ಗಳಿಸುವುದನ್ನು ಮಾತ್ರ ಬೋಧಿಸದೇ ಜೀವನ ಪಾಠ ಹೇಳಿಕೊಡುವ, ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದು ವಿಜಯಪುರ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ಹೇಳಿದರು.</p>.<p>ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ಡಾ.ಎಸ್.ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಂಕಗಳಿಗಷ್ಟೇ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಮಕ್ಕಳ ಪ್ರತಿಭೆ, ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.</p>.<p>ತಂದೆ, ತಾಯಿಯ ನಂತರ ಮಕ್ಕಳ ಜೀವನ ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮನಸ್ಸಿಟ್ಟು ಪಾಠ ಮಾಡುವ ಶಿಕ್ಷಕರು ವಿದ್ಯಾರ್ಥಿಯ ಮನಸ್ಸಿನಲ್ಲಿ ಸದಾ ಇರುತ್ತಾರೆ. ವಿದ್ಯಾರ್ಥಿಯು ಎಂತಹ ಉನ್ನತ ಸ್ಥಾನವನ್ನು ಅಲಂಕರಿಸಿದರೂ ಆ ಶಿಕ್ಷಕರನ್ನು ಮರೆಯುವುದಿಲ್ಲ ಎಂದು ಹೇಳಿದರು.</p>.<p>ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ ಮಾತನಾಡಿ, ದೇಶದ ಭವಿಷ್ಯ ನಿರ್ಮಿಸುವವರು ಶಿಕ್ಷಕರು. ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಲಾಗಿದೆ. ಅಂತೆಯೇ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಸುಧಾರಿಸುವ ಕಾರ್ಯವಾಗಬೇಕಾಗಿದೆ ಎಂದರು.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ವಿ. ಹೊಸೂರು ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.</p>.<p>ಕೋವಿಡ್ ಕಾಲದಲ್ಲಿ ಕಾರ್ಯ ನಿರ್ವಹಿಸಿ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.</p>.<p>ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.</p>.<p>ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷ ಸುರೇಶ್ ದೇಸಾಯಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಶಿವಾನಂದ ಗುಡ್ಡೋಡಗಿ, ಎಸ್.ಎಸ್ ಪಡಶೆಟ್ಟಿ, ರಾಜಶೇಖರ ಉಮರಾಣಿ, ಜಗದೀಶ, ಬಿ.ಎಚ್.ನಾಡಗೇರ, ಸಯ್ಯದ್ ಜುಬೇರ ಸೇರಿದಂತೆ ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<p>***</p>.<p>ಸರ್ಕಾರಿ ಶಾಲೆಗಳಲ್ಲಿ ಕಲಿತರೆ ಒಳ್ಳೆಯ ಭವಿಷ್ಯ ಇದೆ ಎಂಬ ಭಾವನೆಯನ್ನು ಎಲ್ಲರಲ್ಲೂ ಮೂಡಿಸುವಂತಾಗಬೇಕು<br /><strong>ಶ್ರೀಹರಿ ಗೋಳಸಂಗಿ, ಅಧ್ಯಕ್ಷ<br />ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ</strong></p>.<p>****</p>.<p class="Briefhead"><strong>ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು</strong></p>.<p>ವಿಜಯಪುರ: 2021–22ನೇ ಸಾಲಿನಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ ತಲಾ ಏಳು ಜನ ಶಿಕ್ಷಕರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.</p>.<p>ಪ್ರಾಥಮಿಕ ಶಾಲಾ ವಿಭಾಗ: ಅರವಿಂದ ಬಿರಾದಾರ(ಬರಡೋಲ), ಅಕ್ಕಮಹಾದೇವಿ ಕಾಳೆ(ಸಿಂದಗಿ ಪಟ್ಟಣ), ಬಿ.ಎಂ.ಬಿರಾದಾರ(ಹಿರೇಬೇನೂರ), ಜೆ.ವಿ.ಮೊಟಗಿ(ಮುದ್ದಾಪುರ), ಮಲ್ಲಿಕಾರ್ಜುನ ಎಚ್.ಮಾದರ(ನಿಡೋಣಿ), ಜಿ.ಎನ್.ಹೂಗಾರ(ಮುದ್ದೇಬಿಹಾಳ), ಬಿ.ಎಸ್.ಸಜ್ಜನ(ವಿಜಯಪುರ ನಗರ).</p>.<p>ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಅರ್ಚನಾ ಕೆ.(ಯಂಕಂಚಿ), ಎಂ.ಎಸ್.ಹದ್ಲಿ(ವಿಜಯಪುರ ನಗರ), ಗಿರಿಮಲ್ಲಪ್ಪ ತರಡಿ(ಹಲಸಂಗಿ), ಕೆ.ಬಿ.ಕೊಂಗಲ್(ಅಮರಗೋಳ), ಆರ್.ಬಿ.ಸೌದಾಗರ(ಹಿರೇಮಸಳಿ), ಮಹಾದೇವಿ ಕೆ. ಪಾಟೀಲ(ಮಖಣಾಪುರ),ಚನ್ನಬಸಪ್ಪ ಬಿರಾದಾರ(ಮಣಗೂರ ಪು.ಕೆ).</p>.<p>ಪ್ರೌಢಶಾಲಾ ವಿಭಾಗ: ಪ್ರಭಾಕರ ಹಿರೇಮಠ(ಸವನಹಳ್ಳಿ), ಮುಕುಂದ ಆಲೂರ(ವಿಜಯಪುರ ನಗರ), ರಮೇಶ ನಾಯಿಕ(ಹಲಸಂಗಿ), ಅಸ್ಲಾಂ ಯಾ.ನಗಾರ್ಚಿ(ಶಿರಸ್ಯಾಡ), ರಾಜಕುಮಾರ ಮ್ಯಾಗೇರಿ(ಮೂಕಿಹಾಳ), ಪಿ.ಎಸ್.ಅಗ್ನಿ(ಚಟ್ಟರಕಿ), ಎಚ್.ಅರ್.ಬಾಲಿ(ವಿಜಯಪುರ ನಗರ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>