<p><strong>ಮುದ್ದೇಬಿಹಾಳ</strong>: ಧರ್ಮಕ್ಕೆ ಆಚಾರವೇ ಮೂಲ. ಆಚಾರವು ಬೀಜವಾದರೆ ಧರ್ಮವು ಆ ಬೀಜದಿಂದ ಉತ್ಪತ್ತಿಯಾದ ಫಲವಾಗಿದೆ. ಸತ್ಯ, ಅಹಿಂಸೆ ಮುಂತಾದ ಧರ್ಮದ ಎಲ್ಲ ಲಕ್ಷಣಗಳು ಆಚಾರದ ಅಂಗಗಳೇ ಆಗಿವೆ ಎಂದು ಸಾಹಿತಿ ಜಿ.ಎಚ್.ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಆಲೂರು ಗ್ರಾಮದ ಶಂಕರಗೌಡ ಹಿರೇಗೌಡರ ಅವರ ಮನೆಯಲ್ಲಿ ಸಜ್ಜಲಶ್ರೀ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಲಿಂ.ದೊಡ್ಡಬಸಪ್ಪಗೌಡ ಹಿರೇಗೌಡರ ಹಾಗೂ ಭೀಮಬಾಯಿ ದೊಡ್ಡಬಸಪ್ಪ ಗೌಡ ಹಿರೇಗೌಡರ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ದುರ್ಗುಣಗಳನ್ನು ಅಳಿಸಿ ಹಾಕುವುದೇ ಆಚಾರದ ಮುಖ್ಯ ಉದ್ದೇಶವಾಗಿದೆ. ಸತ್ಚಾರಿತ್ರ್ಯ ರೂಢಿಸಿಕೊಂಡರೆ ಉತ್ತಮ ನಾಗರಿಕನಾಗಿ ಪರಿವರ್ತನೆಯಾಗಲು ಸಾಧ್ಯ ಎಂದು ತಿಳಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ , ಎಸ್.ಎಸ್.ಪಾಟೀಲ ಮಾತನಾಡಿ, ಬದುಕಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಬೇಕು’ ಎಂದು ಹೇಳಿದರು.</p>.<p>ವೇ.ಗದಗಯ್ಯ ಹಿರೇಮಠ ,ವೇ.ಸಂಗಯ್ಯ ಹಿರೇಮಠ, ಗುರಲಿಂಗಪ್ಪಗೌಡ ಹಿರೇಗೌಡರ, ದತ್ತಿದಾನಿಗಳಾದ ಶಂಕರಗೌಡ ಹಿರೇಗೌಡರ , ಕೆ.ಎಸ್.ಗೂಳಿ, ಎಸ್.ಆರ್.ಗೌಡರ, ಎಂ.ಎಸ್.ಬಿರಾದಾರ, ಎಸ್.ಎಚ್.ಪಾಟೀಲ, ಎಂ.ಆರ್.ಬೆಳಗಲ್, ಹಿರೇಗೌಡರ ಕುಟುಂಬದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ</strong>: ಧರ್ಮಕ್ಕೆ ಆಚಾರವೇ ಮೂಲ. ಆಚಾರವು ಬೀಜವಾದರೆ ಧರ್ಮವು ಆ ಬೀಜದಿಂದ ಉತ್ಪತ್ತಿಯಾದ ಫಲವಾಗಿದೆ. ಸತ್ಯ, ಅಹಿಂಸೆ ಮುಂತಾದ ಧರ್ಮದ ಎಲ್ಲ ಲಕ್ಷಣಗಳು ಆಚಾರದ ಅಂಗಗಳೇ ಆಗಿವೆ ಎಂದು ಸಾಹಿತಿ ಜಿ.ಎಚ್.ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಆಲೂರು ಗ್ರಾಮದ ಶಂಕರಗೌಡ ಹಿರೇಗೌಡರ ಅವರ ಮನೆಯಲ್ಲಿ ಸಜ್ಜಲಶ್ರೀ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಶರಣ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಲಿಂ.ದೊಡ್ಡಬಸಪ್ಪಗೌಡ ಹಿರೇಗೌಡರ ಹಾಗೂ ಭೀಮಬಾಯಿ ದೊಡ್ಡಬಸಪ್ಪ ಗೌಡ ಹಿರೇಗೌಡರ ಸ್ಮರಣಾರ್ಥ ಬುಧವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ದುರ್ಗುಣಗಳನ್ನು ಅಳಿಸಿ ಹಾಕುವುದೇ ಆಚಾರದ ಮುಖ್ಯ ಉದ್ದೇಶವಾಗಿದೆ. ಸತ್ಚಾರಿತ್ರ್ಯ ರೂಢಿಸಿಕೊಂಡರೆ ಉತ್ತಮ ನಾಗರಿಕನಾಗಿ ಪರಿವರ್ತನೆಯಾಗಲು ಸಾಧ್ಯ ಎಂದು ತಿಳಿಸಿದರು.</p>.<p>ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ , ಎಸ್.ಎಸ್.ಪಾಟೀಲ ಮಾತನಾಡಿ, ಬದುಕಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಬೇಕು’ ಎಂದು ಹೇಳಿದರು.</p>.<p>ವೇ.ಗದಗಯ್ಯ ಹಿರೇಮಠ ,ವೇ.ಸಂಗಯ್ಯ ಹಿರೇಮಠ, ಗುರಲಿಂಗಪ್ಪಗೌಡ ಹಿರೇಗೌಡರ, ದತ್ತಿದಾನಿಗಳಾದ ಶಂಕರಗೌಡ ಹಿರೇಗೌಡರ , ಕೆ.ಎಸ್.ಗೂಳಿ, ಎಸ್.ಆರ್.ಗೌಡರ, ಎಂ.ಎಸ್.ಬಿರಾದಾರ, ಎಸ್.ಎಚ್.ಪಾಟೀಲ, ಎಂ.ಆರ್.ಬೆಳಗಲ್, ಹಿರೇಗೌಡರ ಕುಟುಂಬದವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>