<p><strong>ವಿಜಯಪುರ</strong>: ಇಲ್ಲಿನ ವೇದ ಅಕಾಡೆಮಿಯಲ್ಲಿ ಬುಧವಾರ ಮಕರ ಸಂಗ್ರಮಣ ಹಬ್ಬದ ಆಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ತಿಳಿಸಲಾಯಿತು.</p>.<p>ವಿವಿಧ ರಾಜ್ಯಗಳ ಸಂಸ್ಕೃತಿ ಪ್ರತಿಬಿಂಬಿಸುವ ವೇಷದಲ್ಲಿ ಮಕ್ಕಳು ಕಂಗೊಳಿಸಿದರು. ಕಬ್ಬು, ಕಡಲೆ, ತರಕಾರಿಗಳು ಮತ್ತು ಹೂಗಳಿಂದ ಅಲಂಕೃತಗೊಂಡ ಫಲಪುಷ್ಪ ಪ್ರದರ್ಶನ ಗಮನಸೆಳೆಯಿತು.</p>.<p>ವೇದ ಅಕಾಡೆಮಿ ನಿರ್ದೇಶಕಿ ಶಿವಲೀಲಾ ಕೆಲೂರ ಮಾತನಾಡಿ, ‘ಭಾರತದ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ವಿಶೇಷವಾಗಿದೆ. ಚಳಿಗಾಲ ಮುಗಿದು, ಬೇಸಿಗೆಯ ಮುನ್ಸೂಚನೆ ನೀಡುವ ಮೂಲಕ ಋತುವಿನ ಬದಲಾವಣೆಯನ್ನು ಈ ಹಬ್ಬ ಸೂಚಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಸಂಕ್ರಾಂತಿ ಆಚರಿಸಲಾಗುತ್ತದೆ. ರೈತರಿಗೆ ಇದು ಸುಗ್ಗಿ ಹಬ್ಬವಾಗಿದೆ’ ಎಂದು ವಿವರಿಸಿದರು.</p>.<p>ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ., ಮುಖ್ಯಶಿಕ್ಷಕಿ ರಶ್ಮಿ ಕವಟಗಿಮಠ, ಅಂಬುಜಾ ದೇಶಪಾಂಡೆ, ರೋಹಿಣಿ ಮಾನೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಇಲ್ಲಿನ ವೇದ ಅಕಾಡೆಮಿಯಲ್ಲಿ ಬುಧವಾರ ಮಕರ ಸಂಗ್ರಮಣ ಹಬ್ಬದ ಆಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವ ತಿಳಿಸಲಾಯಿತು.</p>.<p>ವಿವಿಧ ರಾಜ್ಯಗಳ ಸಂಸ್ಕೃತಿ ಪ್ರತಿಬಿಂಬಿಸುವ ವೇಷದಲ್ಲಿ ಮಕ್ಕಳು ಕಂಗೊಳಿಸಿದರು. ಕಬ್ಬು, ಕಡಲೆ, ತರಕಾರಿಗಳು ಮತ್ತು ಹೂಗಳಿಂದ ಅಲಂಕೃತಗೊಂಡ ಫಲಪುಷ್ಪ ಪ್ರದರ್ಶನ ಗಮನಸೆಳೆಯಿತು.</p>.<p>ವೇದ ಅಕಾಡೆಮಿ ನಿರ್ದೇಶಕಿ ಶಿವಲೀಲಾ ಕೆಲೂರ ಮಾತನಾಡಿ, ‘ಭಾರತದ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯು ವಿಶೇಷವಾಗಿದೆ. ಚಳಿಗಾಲ ಮುಗಿದು, ಬೇಸಿಗೆಯ ಮುನ್ಸೂಚನೆ ನೀಡುವ ಮೂಲಕ ಋತುವಿನ ಬದಲಾವಣೆಯನ್ನು ಈ ಹಬ್ಬ ಸೂಚಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಸಂಕ್ರಾಂತಿ ಆಚರಿಸಲಾಗುತ್ತದೆ. ರೈತರಿಗೆ ಇದು ಸುಗ್ಗಿ ಹಬ್ಬವಾಗಿದೆ’ ಎಂದು ವಿವರಿಸಿದರು.</p>.<p>ಪ್ರಾಂಶುಪಾಲ ಮಧ್ವಪ್ರಸಾದ ಜಿ.ಕೆ., ಮುಖ್ಯಶಿಕ್ಷಕಿ ರಶ್ಮಿ ಕವಟಗಿಮಠ, ಅಂಬುಜಾ ದೇಶಪಾಂಡೆ, ರೋಹಿಣಿ ಮಾನೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>