<p><strong>ಚಡಚಣ</strong>: ಬಂಜಾರಾ ಸಮೂದಾಯದ ಆಧ್ಯಾತ್ಮಿಕ ಗುರು,ಮೂಢ ನಂಬಿಕೆ,ಪ್ರಾಣಿ ಬಲಿ ನಿರ್ಮೂಲನೆ ಹಾಗೂ ಅರಣ್ಯ ವಾಸಿಗಳ ಹಕ್ಕುಗಾಗಿ ಶ್ರಮಿಸಿದ ಶ್ರೀ ಸಂತ ಸೇವಾಲಾಲ ಮಹಾರಾಜರು ಓರ್ವ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಹೇಳಿದರು.</p>.<p>ಪಟ್ಟಣದ ಪ್ರವಾಶಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಬಂಜಾರಾ ಸಮೂದಾಯವು ವಿಶಿಷ್ಟ ಧಾರ್ಮಿಕ ಆಚಾರ ವಿಚಾರ ಸಂಸ್ಕೃತಿ, ಸಂಪ್ರದಾಯ ಹೊಂದಿದೆ. ಬಂಜಾರ ಸಮುದಾಯ ಹೆಣ್ಣು ಮಕ್ಕಳಲ್ಲಿ ಕುಟುಂಬ ನಿರ್ವಹಣೆಯ ಶ್ರಮವಿದೆ ಎಂದರು.</p>.<p>ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಬಂಜಾರ ಸಮಾಜದ ಜನ ಸಹೃದಯಿಗಳು, ಜಾನಪದ ಶ್ರೀಮಂತಿಕೆಗೆ ಈ ಸಮುದಾಯದ ಹೆಸರುವಾಸಿಯಾಗಿದೆ. ಸಂತ ಸೇವಾಲಾಲ ಅಹಿಂಸಾ ಮಾರ್ಗವಾದಿಗಳು. ಬಸವಣ್ಣನವರ ನಂತರ 18 ನೇ ಶತಮಾನದಲ್ಲಿ ಪವಾಡ ಪುರುಷ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅನುಸರಿಸಿ ಅಳವಡಿಸಿಕೊಂಡು ಹೋಗಬೇಕು ಎಂದರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರವಿಕುಮಾರ ಜಾಧವ ಮಾತನಾಡಿ, ತಾಲ್ಲೂಕಿನ ಕೆಲವು ಬಂಜಾರಾ ಸಮುದಾಯ ಊರುಗಳಿಗೆ ತೆರಳಲು ರಸ್ತೆ , ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.</p>.<p>ತಾಪಂ ಇ.ಒ ಸಂಜಯ ಖಡಗೇಕರ, ವಿಜಯಕುಮಾರ ಹವಾಲ್ದಾರ, ಪಪಂ ಉಪಾಧ್ಯಕ್ಷ ಇಲಾಯಿ ನದಾಫ, ಡಿ ಎಲ್ ಚವ್ಹಾಣ, ಕಾಮೇಶ ಪಾಟೀಲ, ಆರ್ ಡಿ ಹಕ್ಕೆ, ವಸಂತ ಪವಾರ, ದಯಾನಂದ ಪಾಟೀಲ, ಸಂತೋಷ ಗೌಡ ಪಾಟೀಲ, ಬಸುಸೌಹುಕಾರ ಬಿರಾದಾರ, ಮಹಾದೇವ ಹಿರೇಕುರಬರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಡಚಣ</strong>: ಬಂಜಾರಾ ಸಮೂದಾಯದ ಆಧ್ಯಾತ್ಮಿಕ ಗುರು,ಮೂಢ ನಂಬಿಕೆ,ಪ್ರಾಣಿ ಬಲಿ ನಿರ್ಮೂಲನೆ ಹಾಗೂ ಅರಣ್ಯ ವಾಸಿಗಳ ಹಕ್ಕುಗಾಗಿ ಶ್ರಮಿಸಿದ ಶ್ರೀ ಸಂತ ಸೇವಾಲಾಲ ಮಹಾರಾಜರು ಓರ್ವ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ಅವರು ಹೇಳಿದರು.</p>.<p>ಪಟ್ಟಣದ ಪ್ರವಾಶಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಬಂಜಾರಾ ಸಮೂದಾಯವು ವಿಶಿಷ್ಟ ಧಾರ್ಮಿಕ ಆಚಾರ ವಿಚಾರ ಸಂಸ್ಕೃತಿ, ಸಂಪ್ರದಾಯ ಹೊಂದಿದೆ. ಬಂಜಾರ ಸಮುದಾಯ ಹೆಣ್ಣು ಮಕ್ಕಳಲ್ಲಿ ಕುಟುಂಬ ನಿರ್ವಹಣೆಯ ಶ್ರಮವಿದೆ ಎಂದರು.</p>.<p>ತಹಶೀಲ್ದಾರ್ ಸಂಜಯ ಇಂಗಳೆ ಮಾತನಾಡಿ, ಬಂಜಾರ ಸಮಾಜದ ಜನ ಸಹೃದಯಿಗಳು, ಜಾನಪದ ಶ್ರೀಮಂತಿಕೆಗೆ ಈ ಸಮುದಾಯದ ಹೆಸರುವಾಸಿಯಾಗಿದೆ. ಸಂತ ಸೇವಾಲಾಲ ಅಹಿಂಸಾ ಮಾರ್ಗವಾದಿಗಳು. ಬಸವಣ್ಣನವರ ನಂತರ 18 ನೇ ಶತಮಾನದಲ್ಲಿ ಪವಾಡ ಪುರುಷ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅನುಸರಿಸಿ ಅಳವಡಿಸಿಕೊಂಡು ಹೋಗಬೇಕು ಎಂದರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರವಿಕುಮಾರ ಜಾಧವ ಮಾತನಾಡಿ, ತಾಲ್ಲೂಕಿನ ಕೆಲವು ಬಂಜಾರಾ ಸಮುದಾಯ ಊರುಗಳಿಗೆ ತೆರಳಲು ರಸ್ತೆ , ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.</p>.<p>ತಾಪಂ ಇ.ಒ ಸಂಜಯ ಖಡಗೇಕರ, ವಿಜಯಕುಮಾರ ಹವಾಲ್ದಾರ, ಪಪಂ ಉಪಾಧ್ಯಕ್ಷ ಇಲಾಯಿ ನದಾಫ, ಡಿ ಎಲ್ ಚವ್ಹಾಣ, ಕಾಮೇಶ ಪಾಟೀಲ, ಆರ್ ಡಿ ಹಕ್ಕೆ, ವಸಂತ ಪವಾರ, ದಯಾನಂದ ಪಾಟೀಲ, ಸಂತೋಷ ಗೌಡ ಪಾಟೀಲ, ಬಸುಸೌಹುಕಾರ ಬಿರಾದಾರ, ಮಹಾದೇವ ಹಿರೇಕುರಬರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>