<p><strong>ಸೋಲಾಪುರ:ಇ</strong>ಲ್ಲಿನ ಶ್ರೀ ಸಿದ್ದೇಶ್ವರ ಜಾತ್ರೆ ನಿಮಿತ್ಯವಾಗಿಜಿಲ್ಲಾ ಉಸ್ತುವಾರಿ ಸಚಿವ ದತ್ತಾತ್ರೆಯ ಭರಣೆ ಅವರು ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.</p>.<p>‘ಕೊರೋನಾದಿಂದ ತತ್ತರಿಸಿರುವ ಸೋಲಾಪುರದ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ನೀಡು ದೇವರೇ’ ಎಂದು ಅವರು ಶ್ರೀ ಸಿದ್ದೇಶ್ವರ ದೇವರಲ್ಲಿ ಬೇಡಿಕೊಂಡರು.</p>.<p>ಕೋರೋನಾ ಇನ್ನು ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಕಳೆದ ಕೆಲವು ದಿನಗಳಿಂದ ಪ್ರಮಾಣ ಹೆಚ್ಚಾಗುತ್ತಿದೆ. ಯಾರೊಬ್ಬರೂ ನಿರ್ಲಕ್ಷ್ಯ ವಹಿಸದೇ ಕುಟುಂಬದ ಕಾಳಜಿ ವಹಿಸಬೇಕು ಎಂದರು.</p>.<p>15 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.</p>.<p>ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಸುರೇಶ, ಸಂತೋಷ ಪವಾರ, ಕಿಸನ ಜಾಧವ, ತೌಫಿಕ ಶೇಖ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.</p>.<p class="Subhead">ಹೋಮ ಹವನ, ಪೂಜೆ:</p>.<p>ಕೋವಿಡ್ ನಿರ್ಬಂಧಗಳ ನಡುವೆಯೂ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಭಕ್ತರು ಉತ್ಸಾಹ, ಸಡಗರ, ಸಂಭ್ರಮದಿಂದ ಹೋಮ, ಹವನ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.</p>.<p>ಶ್ರೀ ಸಿದ್ದೇಶ್ವರ ಮಹಾರಾಜ ಕಿ ಜೈ, ಹರ್ ಬೋಲಾ ಹರ್ ಹರ್... ಎಂಬ ಜಯಘೋಷ ಮೊಳಗಿತು.</p>.<p>ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ದೂರದಿಂದ ನಿಂತು ಕಾರ್ಯಕ್ರಮ ವೀಕ್ಷಿಸಿದರು.</p>.<p>ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಆರ್ಚಕ ಹಿರೇ ಹಬ್ಬು ಪೂಜೆ ಸಲ್ಲಿಸಿದರು.</p>.<p>ಶಾಸಕ ವಿಜಯಕುಮಾರ್ ದೇಶಮುಖ, ವಿಶ್ವನಾಥ ಚಾಕೋತೆ, ಜಾತ್ರಾ ಸಮಿತಿ ಅಧ್ಯಕ್ಷ ಭೀಮಾಶಂಕರ್ ಪಠನೆ, ದಾದಾಸಾಹೇಬ್ ಬೋಗಡೆ, ಸಿದ್ದಾರಾಮ ಚಾಕೋತೆ ಪಾಲ್ಗೊಂಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಸೋಲಾಪುರ:ಇ</strong>ಲ್ಲಿನ ಶ್ರೀ ಸಿದ್ದೇಶ್ವರ ಜಾತ್ರೆ ನಿಮಿತ್ಯವಾಗಿಜಿಲ್ಲಾ ಉಸ್ತುವಾರಿ ಸಚಿವ ದತ್ತಾತ್ರೆಯ ಭರಣೆ ಅವರು ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ, ದೇವರ ದರ್ಶನ ಪಡೆದರು.</p>.<p>‘ಕೊರೋನಾದಿಂದ ತತ್ತರಿಸಿರುವ ಸೋಲಾಪುರದ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ನೀಡು ದೇವರೇ’ ಎಂದು ಅವರು ಶ್ರೀ ಸಿದ್ದೇಶ್ವರ ದೇವರಲ್ಲಿ ಬೇಡಿಕೊಂಡರು.</p>.<p>ಕೋರೋನಾ ಇನ್ನು ಸಂಪೂರ್ಣವಾಗಿ ಕಡಿಮೆಯಾಗಿಲ್ಲ ಕಳೆದ ಕೆಲವು ದಿನಗಳಿಂದ ಪ್ರಮಾಣ ಹೆಚ್ಚಾಗುತ್ತಿದೆ. ಯಾರೊಬ್ಬರೂ ನಿರ್ಲಕ್ಷ್ಯ ವಹಿಸದೇ ಕುಟುಂಬದ ಕಾಳಜಿ ವಹಿಸಬೇಕು ಎಂದರು.</p>.<p>15 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.</p>.<p>ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಧರ್ಮರಾಜ ಕಾಡಾದಿ, ಸುರೇಶ, ಸಂತೋಷ ಪವಾರ, ಕಿಸನ ಜಾಧವ, ತೌಫಿಕ ಶೇಖ್, ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.</p>.<p class="Subhead">ಹೋಮ ಹವನ, ಪೂಜೆ:</p>.<p>ಕೋವಿಡ್ ನಿರ್ಬಂಧಗಳ ನಡುವೆಯೂ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಭಕ್ತರು ಉತ್ಸಾಹ, ಸಡಗರ, ಸಂಭ್ರಮದಿಂದ ಹೋಮ, ಹವನ, ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.</p>.<p>ಶ್ರೀ ಸಿದ್ದೇಶ್ವರ ಮಹಾರಾಜ ಕಿ ಜೈ, ಹರ್ ಬೋಲಾ ಹರ್ ಹರ್... ಎಂಬ ಜಯಘೋಷ ಮೊಳಗಿತು.</p>.<p>ಕೋವಿಡ್ ಹಿನ್ನೆಲೆಯಲ್ಲಿ ಭಕ್ತರು ದೂರದಿಂದ ನಿಂತು ಕಾರ್ಯಕ್ರಮ ವೀಕ್ಷಿಸಿದರು.</p>.<p>ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಆರ್ಚಕ ಹಿರೇ ಹಬ್ಬು ಪೂಜೆ ಸಲ್ಲಿಸಿದರು.</p>.<p>ಶಾಸಕ ವಿಜಯಕುಮಾರ್ ದೇಶಮುಖ, ವಿಶ್ವನಾಥ ಚಾಕೋತೆ, ಜಾತ್ರಾ ಸಮಿತಿ ಅಧ್ಯಕ್ಷ ಭೀಮಾಶಂಕರ್ ಪಠನೆ, ದಾದಾಸಾಹೇಬ್ ಬೋಗಡೆ, ಸಿದ್ದಾರಾಮ ಚಾಕೋತೆ ಪಾಲ್ಗೊಂಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>