ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ವಿಜಯಪುರದಲ್ಲಿ ಕನ್ನಡ ಸಂಘಟನೆಗಳು ಹೇಗೆ ಬಂದ್ ನಡೆಸುತ್ತಾರೆ ನೋಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ದಮಕಿ ಹಾಕಿದ್ದರು. ಅಲ್ಲದೇ, ಕರವೇ ಎಂದರೆ ಕಳ್ಳರ ರಕ್ಷಣಾ ಕೂಟ ಎಂದು ಟೀಕಿಸಿದ್ದರು. ನಗರದ ವ್ಯಾಪಾರಸ್ಥರು, ಹಿಂದೂ ಸಂಘಟನೆಗಳ ಮುಖಂಡರ ಸಭೆ ನಡೆಸಿ, ಬಂದ್ ವಿಫಲಗೊಳಿಸಲು ಕರೆ ನೀಡಿದ್ದರು.