<p><strong>ಸಿಂದಗಿ</strong>: ಈ ನೆಲದ ಹೆಮ್ಮೆಯ ಪುತ್ರ, ರಂಗಭೂಮಿಯ ಮೇರುನಟ, ನಟಭಯಂಕರರೆಂದೇ ಬಿರುದಾಂಕಿತರಾಗಿದ್ದ ರಾಜ್ಯಮಟ್ಟದ ರಂಗಭೂಮಿ ಖ್ಯಾತ ಕಲಾವಿದ ತಾಲ್ಲೂಕಿನ ಹಂದಿಗನೂರ ಗ್ರಾಮದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಬಹು ವರ್ಷಗಳಿಂದ ತಾಂತ್ರಿಕ ಕಾರಣಾಂತರದಿಂದ ನನೆಗುದಿದೆ ಬಿದ್ದಿತ್ತು.</p>.<p>‘ಈಗ ₹55 ಲಕ್ಷ ಅನುದಾನ ಬಿಡುಗಡೆಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಎರಡನೆಯ ಹಂತದ ₹60 ಲಕ್ಷ ಅನುದಾನದ ಟೆಂಡರ್ ಪ್ರಕ್ರಿಯೆ ಬೇಗನೆ ನಡೆಯುವುದು. ಈ ರಂಗಮಂದಿರ ನನ್ನ ಶಾಸಕ ಅಧಿಕಾರ ಅವಧಿಯಲ್ಲಿಯೇ ಉದ್ಘಾಟನೆಗೊಳ್ಳುತ್ತದೆ’ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.</p>.<p>ಪಟ್ಟಣದ ಜಿ.ಪಿ.ಪೋರವಾಲ ಕಾಲೇಜು ಎದುರಿನ ಪುರಸಭೆ ನಿವೇಶನದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಇಡೀ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿಸಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಕರ ಭವನಕ್ಕಾಗಿ ₹50 ಲಕ್ಷ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿದೆ. ಡಾ. ಅಂಬೇಡ್ಕರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ₹1 ಕೋಟಿ ವೆಚ್ಚದಲ್ಲಿ ಡಲ್ಟ್ ವಿಭಾಗದಿಂದ ರಸ್ತೆ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಾಣ, ವಿದ್ಯುದೀಪಗಳ ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳುವುದು. ಚಿಕ್ಕಸಿಂದಗಿ ಬೈಪಾಸ್ನಿಂದ ಹೆಸ್ಕಾಂ ಸ್ಟೇಷನ್ ಬಳಿ ಪೆಟ್ರೋಲ್ ಬಂಕ್ವರೆಗೆ ಹದಗೆಟ್ಟ ರಸ್ತೆ ಸುಧಾರಣೆಗಾಗಿ ₹4.60 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ದೊರಕುವುದು’ ಎಂದು ವಿವರಿಸಿದರು.</p>.<p>ಕೆರೆ ಅಭಿವೃದ್ಧಿ ಯೋಜನೆಯಡಿ ಕೆರೆಯ ಮೇಲೆ ವಾಯುವಿಹಾರಕ್ಕಾಗಿ ಅಗತ್ಯವಾಗಿರುವ ಕಾಮಗಾರಿಗಾಗಿ ₹53 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಪಟ್ಟಣದ ಜನತೆಗೆ ಆರೋಗ್ಯದ ದೃಷ್ಟಿಯಿಂದ ತೀರ ಅಗತ್ಯವಾಗಿರುವ ₹45 ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾಗಿರುವ ಸುಸಜ್ಜಿತಗೊಂಡ ಹೈಟೆಕ್ ಅಬ್ಯುಲನ್ಸ್ ಮುಂಬರುವ ಜನವರಿ 26 ರಂದು ಲೋಕಾರ್ಪಣೆಗೊಳ್ಳುವುದು ಎಂದು ತಿಳಿಸಿದರು.</p>.<p>ಸಾರಂಗಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.</p>.<p>ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಎಂ.ಎಂ.ಪಡಶೆಟ್ಟಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಿದ್ಧಲಿಂಗ ಚೌಧರಿ ಮಾತನಾಡಿದರು.</p>.<p>ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ.ಮುಂಡೇವಾಡಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಹಾಸಿಂ ಆಳಂದ, ಪುರಸಭೆ ಜೆಇ ಅಜರ್ ನಾಟೀಕಾರ, ಗುತ್ತಿಗೆದಾರ ಮುತ್ತು ಮಾಳೇಗಾರ ಇದ್ದರು.</p>.<p><strong>‘ಗದಗ ತೋಂಟದಶ್ರೀ ಪುತ್ಥಳಿ ಸ್ಥಾಪನೆ’</strong></p><p>ಸಿಂದಗಿ ಪಟ್ಟಣದ ಕೆರೆ ಕೆಳಗಿರುವ ಸಿಂದಗಿ ಸಿರಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ವನವನ್ನು ₹2.40 ಕೋಟಿ ವಿಶೇಷ ಅನುದಾನದಲ್ಲಿ ಭವ್ಯ ರೀತಿಯಲ್ಲಿ ಹಸಿರಾಗಿಸಿ ಅಲ್ಲಿ ಸಿಂದಗಿಯವರೇ ಆದ ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂ. ಸಿದ್ಧಲಿಂಗ ಶ್ರೀಗಳ ನೆನಹುಗಾಗಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಇದೇ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ</strong>: ಈ ನೆಲದ ಹೆಮ್ಮೆಯ ಪುತ್ರ, ರಂಗಭೂಮಿಯ ಮೇರುನಟ, ನಟಭಯಂಕರರೆಂದೇ ಬಿರುದಾಂಕಿತರಾಗಿದ್ದ ರಾಜ್ಯಮಟ್ಟದ ರಂಗಭೂಮಿ ಖ್ಯಾತ ಕಲಾವಿದ ತಾಲ್ಲೂಕಿನ ಹಂದಿಗನೂರ ಗ್ರಾಮದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಬಹು ವರ್ಷಗಳಿಂದ ತಾಂತ್ರಿಕ ಕಾರಣಾಂತರದಿಂದ ನನೆಗುದಿದೆ ಬಿದ್ದಿತ್ತು.</p>.<p>‘ಈಗ ₹55 ಲಕ್ಷ ಅನುದಾನ ಬಿಡುಗಡೆಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಎರಡನೆಯ ಹಂತದ ₹60 ಲಕ್ಷ ಅನುದಾನದ ಟೆಂಡರ್ ಪ್ರಕ್ರಿಯೆ ಬೇಗನೆ ನಡೆಯುವುದು. ಈ ರಂಗಮಂದಿರ ನನ್ನ ಶಾಸಕ ಅಧಿಕಾರ ಅವಧಿಯಲ್ಲಿಯೇ ಉದ್ಘಾಟನೆಗೊಳ್ಳುತ್ತದೆ’ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.</p>.<p>ಪಟ್ಟಣದ ಜಿ.ಪಿ.ಪೋರವಾಲ ಕಾಲೇಜು ಎದುರಿನ ಪುರಸಭೆ ನಿವೇಶನದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಂದಿಗನೂರ ಸಿದ್ರಾಮಪ್ಪ ರಂಗಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಇಡೀ ಪಟ್ಟಣವನ್ನು ಜಿಲ್ಲೆಯಲ್ಲಿಯೇ ಮಾದರಿಯನ್ನಾಗಿಸಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಕರ ಭವನಕ್ಕಾಗಿ ₹50 ಲಕ್ಷ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿದೆ. ಡಾ. ಅಂಬೇಡ್ಕರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ₹1 ಕೋಟಿ ವೆಚ್ಚದಲ್ಲಿ ಡಲ್ಟ್ ವಿಭಾಗದಿಂದ ರಸ್ತೆ ಎರಡೂ ಬದಿ ಪಾದಚಾರಿ ಮಾರ್ಗ ನಿರ್ಮಾಣ, ವಿದ್ಯುದೀಪಗಳ ಅಳವಡಿಕೆ ಕಾರ್ಯ ಪ್ರಾರಂಭಗೊಳ್ಳುವುದು. ಚಿಕ್ಕಸಿಂದಗಿ ಬೈಪಾಸ್ನಿಂದ ಹೆಸ್ಕಾಂ ಸ್ಟೇಷನ್ ಬಳಿ ಪೆಟ್ರೋಲ್ ಬಂಕ್ವರೆಗೆ ಹದಗೆಟ್ಟ ರಸ್ತೆ ಸುಧಾರಣೆಗಾಗಿ ₹4.60 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ ಕಾಮಗಾರಿಗೆ ಚಾಲನೆ ದೊರಕುವುದು’ ಎಂದು ವಿವರಿಸಿದರು.</p>.<p>ಕೆರೆ ಅಭಿವೃದ್ಧಿ ಯೋಜನೆಯಡಿ ಕೆರೆಯ ಮೇಲೆ ವಾಯುವಿಹಾರಕ್ಕಾಗಿ ಅಗತ್ಯವಾಗಿರುವ ಕಾಮಗಾರಿಗಾಗಿ ₹53 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಪಟ್ಟಣದ ಜನತೆಗೆ ಆರೋಗ್ಯದ ದೃಷ್ಟಿಯಿಂದ ತೀರ ಅಗತ್ಯವಾಗಿರುವ ₹45 ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾಗಿರುವ ಸುಸಜ್ಜಿತಗೊಂಡ ಹೈಟೆಕ್ ಅಬ್ಯುಲನ್ಸ್ ಮುಂಬರುವ ಜನವರಿ 26 ರಂದು ಲೋಕಾರ್ಪಣೆಗೊಳ್ಳುವುದು ಎಂದು ತಿಳಿಸಿದರು.</p>.<p>ಸಾರಂಗಮಠದ ಪೀಠಾಧ್ಯಕ್ಷರಾದ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.</p>.<p>ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಎಂ.ಎಂ.ಪಡಶೆಟ್ಟಿ, ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಸಿದ್ಧಲಿಂಗ ಚೌಧರಿ ಮಾತನಾಡಿದರು.</p>.<p>ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಎಂ.ಮುಂಡೇವಾಡಗಿ, ಪುರಸಭೆ ಮಾಜಿ ಉಪಾಧ್ಯಕ್ಷ ಹಾಸಿಂ ಆಳಂದ, ಪುರಸಭೆ ಜೆಇ ಅಜರ್ ನಾಟೀಕಾರ, ಗುತ್ತಿಗೆದಾರ ಮುತ್ತು ಮಾಳೇಗಾರ ಇದ್ದರು.</p>.<p><strong>‘ಗದಗ ತೋಂಟದಶ್ರೀ ಪುತ್ಥಳಿ ಸ್ಥಾಪನೆ’</strong></p><p>ಸಿಂದಗಿ ಪಟ್ಟಣದ ಕೆರೆ ಕೆಳಗಿರುವ ಸಿಂದಗಿ ಸಿರಿ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ವನವನ್ನು ₹2.40 ಕೋಟಿ ವಿಶೇಷ ಅನುದಾನದಲ್ಲಿ ಭವ್ಯ ರೀತಿಯಲ್ಲಿ ಹಸಿರಾಗಿಸಿ ಅಲ್ಲಿ ಸಿಂದಗಿಯವರೇ ಆದ ಗದಗ ತೋಂಟದಾರ್ಯ ಸಂಸ್ಥಾನಮಠದ ಲಿಂ. ಸಿದ್ಧಲಿಂಗ ಶ್ರೀಗಳ ನೆನಹುಗಾಗಿ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಇದೇ ಸಂದರ್ಭದಲ್ಲಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>