ವಿಜಯಪುರ: ರಾಜಸ್ತಾನ ಮೂಲಕ ಗೂಡ್ಸ್ (ಆರ್ಜೆ 14 ಜಿಜಿ 4191)ವೊಂದರಲ್ಲಿ ಸಾಗಿಸುತ್ತಿದ್ದ ₹33.80 ಲಕ್ಷ ಮೌಲ್ಯದ 30 ಕೆ.ಜಿ ಅಫೀಮು ಪುಡಿ ಮತ್ತು 10 ಕೆ.ಜಿ.ಗಾಂಜಾವನ್ನು ಅಬಕಾರಿ ಸಿಬ್ಬಂದಿ ಚಡಚಣ ತಾಲ್ಲೂಕಿನ ಶಿರಡೋಣ ಚೆಕ್ ಪೋಸ್ಟ್ನಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸಂಜಯಗಾಂಧಿ ನಗರದ ಬಶೀರ್ ಅಹ್ಮದ್ ಭಟ್(32) ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ವಿಜಯಪುರ ಅಬಕಾರಿ ಉಪ ಆಯುಕ್ತ ಶಿವಲಿಂಗಪ್ಪ ಬನಹಟ್ಟಿ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕ ಸಿದ್ದಪ್ಪ ಯಡಗಟ್ಟಿ, ದೌಲತರಾಯ, ಸಿಬ್ಬಂದಿ ಎಲ್.ಎಸ್.ಸಲಗರೆ, ಪ್ರವೀಣ ರಂಗಸುಭೆ, ಮೃತ್ಯುಂಜಯ ಜಕಾತಿ, ಅಶೋಕ ಗೋಣಸಗಿ, ಶಿವಾನಂದ ಕೊಡತೆ, ಸಂಜೀವಕುಮಾರ್ ಹೂವಿನವರ, ಭೀಮರಾಯ ತಳವಾರ, ಅಜೀಮ್ ಮನಗೂಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.