<p><strong>ವಿಜಯಪುರ:</strong> ಇಲ್ಲಿನ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಕಾರಿ ಮತ್ತು ಮತ್ತು ಸಹಾಯಕ ಆಡಳಿತಾಕಾರಿಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 20ರಂದು ಧರಣಿ ನಡೆಸಲಾಗುವುದು ಎಂದು ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಮೇಲಧಿಕಾರಿಗಳು, ಕಾರ್ಮಿಕರ ವೈದ್ಯಕೀಯ ಬಿಲ್ಗಳನ್ನು (1075 ಪ್ರಕರಣ) 2 ವರ್ಷಗಳಾದರೂ ಕೇಂದ್ರ ಕಚೇರಿಗೆ ಕಳುಹಿಸದೆ ತಡವಾಗಿ ಕಳುಹಿಸಿದ್ದಾರೆ. ಕೇಂದ್ರ ಕಚೇರಿಯಿಂದ ಬಂದ ಬಿಲ್ಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.</p>.<p>ವಿಭಾಗೀಯ ನಿಯಂತ್ರಣಾಕಾರಿಗಳು ಕೇಂದ್ರ ಕಚೇರಿಯ ಸುತ್ತೋಲೆಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ದಂಡ ವಿಧಿಸುತ್ತಾರೆ. ಸಣ್ಣಪುಟ್ಟ ಕಾರಣಗಳಿಗೆ ಅಮಾನತುಗೊಳಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅನೇಕ ನೌಕರರಿಗೆ ಗೈರು ಹಾಜರಿ ಹಾಕಿ, ವೇತನ ಕೊಡದೆ ದಂಡ ವಿಧಿಸುತ್ತಿದ್ದಾರೆ ಎಂದು ದೂರಿದರು.</p>.<p>ನಿವೃತ್ತರಾದ ಕಾರ್ಮಿಕರಿಗೆ ರಜೆಯ ನಗದು ಕೊಟ್ಟಿಲ್ಲ. ಇದರಿಂದ ನಿವೃತ್ತರಿಗೆ ಬರಬೇಕಾದ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ಅಧ್ಯಕ್ಷ ಎಂ.ಎಚ್.ಅಗರಖೇಡ್, ಕಾರ್ಯಾಧ್ಯಕ್ಷ ಎ.ಎ.ಮುಲ್ಲಾ, ಪದಾಧಿಕಾರಿಗಳಾದ ಗೋಪಾಲ ಮಲಕನಗೌಡ ಬಿರಾದಾರ, ಅಶೋಕ ಪವಾರ, ಕುತುಬ್ ಅಗರಖೇಡ, ಎಂ.ಎನ್.ಇಲಕಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಇಲ್ಲಿನ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಕಾರಿ ಮತ್ತು ಮತ್ತು ಸಹಾಯಕ ಆಡಳಿತಾಕಾರಿಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ 20ರಂದು ಧರಣಿ ನಡೆಸಲಾಗುವುದು ಎಂದು ನೌಕರರ ಸಂಘದ ಪದಾಧಿಕಾರಿಗಳು ತಿಳಿಸಿದರು.</p>.<p>ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಮೇಲಧಿಕಾರಿಗಳು, ಕಾರ್ಮಿಕರ ವೈದ್ಯಕೀಯ ಬಿಲ್ಗಳನ್ನು (1075 ಪ್ರಕರಣ) 2 ವರ್ಷಗಳಾದರೂ ಕೇಂದ್ರ ಕಚೇರಿಗೆ ಕಳುಹಿಸದೆ ತಡವಾಗಿ ಕಳುಹಿಸಿದ್ದಾರೆ. ಕೇಂದ್ರ ಕಚೇರಿಯಿಂದ ಬಂದ ಬಿಲ್ಗಳನ್ನು ತಮ್ಮಲ್ಲೇ ಇಟ್ಟುಕೊಂಡು ಸತಾಯಿಸುತ್ತಿದ್ದಾರೆ. ಇದರಿಂದ ಕಾರ್ಮಿಕರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು.</p>.<p>ವಿಭಾಗೀಯ ನಿಯಂತ್ರಣಾಕಾರಿಗಳು ಕೇಂದ್ರ ಕಚೇರಿಯ ಸುತ್ತೋಲೆಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ದಂಡ ವಿಧಿಸುತ್ತಾರೆ. ಸಣ್ಣಪುಟ್ಟ ಕಾರಣಗಳಿಗೆ ಅಮಾನತುಗೊಳಿಸುತ್ತಾರೆ. ಕೋವಿಡ್ ಸಂದರ್ಭದಲ್ಲಿ ಅನೇಕ ನೌಕರರಿಗೆ ಗೈರು ಹಾಜರಿ ಹಾಕಿ, ವೇತನ ಕೊಡದೆ ದಂಡ ವಿಧಿಸುತ್ತಿದ್ದಾರೆ ಎಂದು ದೂರಿದರು.</p>.<p>ನಿವೃತ್ತರಾದ ಕಾರ್ಮಿಕರಿಗೆ ರಜೆಯ ನಗದು ಕೊಟ್ಟಿಲ್ಲ. ಇದರಿಂದ ನಿವೃತ್ತರಿಗೆ ಬರಬೇಕಾದ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ಅಧ್ಯಕ್ಷ ಎಂ.ಎಚ್.ಅಗರಖೇಡ್, ಕಾರ್ಯಾಧ್ಯಕ್ಷ ಎ.ಎ.ಮುಲ್ಲಾ, ಪದಾಧಿಕಾರಿಗಳಾದ ಗೋಪಾಲ ಮಲಕನಗೌಡ ಬಿರಾದಾರ, ಅಶೋಕ ಪವಾರ, ಕುತುಬ್ ಅಗರಖೇಡ, ಎಂ.ಎನ್.ಇಲಕಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>