ವಿಜಯಪುರ: ಇಲ್ಲಿನಮಲ್ಲಿಕಾರ್ಜುನ ನಗರ ಹಾಗೂ ಶ್ರೀನಗರದಲ್ಲಿ ಎರಡು ಮನೆಗಳಲ್ಲಿ ಮಂಗಳವಾರ ನಸುಕಿನಲ್ಲಿ ಕಳುವಾಗಿದೆ.
ಮಲ್ಲಿಕಾರ್ಜುನ ನಗರದ ಮಲ್ಲನಗೌಡ ಬಿರಾದಾರ ಎಂಬುವವರ ಮನೆಯಬಾಗಿಲಿಗೆ ಹಾಕಿದ್ದ ಕೊಂಡಿಯನ್ನು ಕಿಟಕಿ ಮೂಲಕ ತೆಗೆದು ಒಳಪ್ರವೇಶಿಸಿರುವ ಕಳ್ಳರು, ಮನೆಯಲ್ಲಿದ್ದ 120 ಗ್ರಾಂ ಚಿನ್ನಾಭರಣ, ₹ 1 ಲಕ್ಷ ನಗದು ಹಾಗೂಮನೆ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್ ಕಾರನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಶ್ರೀನಗರದಲ್ಲಿಡಾ.ಜಿ.ಎಂ. ಚೌಗಲೆ ಎಂಬುವವವರ ಮನೆಯಕಿಟಕಿ ಗ್ರಿಲ್ ಮುರಿದು ಒಳ ಪ್ರವೇಶಿಸಿ ಮನೆಯಲ್ಲಿದ್ದ 20 ಗ್ರಾಂ ಚಿನ್ನ ಹಾಗೂ ನಗದು ಕದ್ದು ಪರಾರಿಯಾಗಿದ್ದಾರೆ.