<p><strong>ಮುದ್ದೇಬಿಹಾಳ</strong>: ಇಲ್ಲಿಯ ಬಸ್ ನಿಲ್ದಾಣಕ್ಕೆ ಹಳೆ ಮಾರುಕಟ್ಟೆಯಿಂದ ಇರುವ ಒಳರಸ್ತೆಯಲ್ಲಿ ಮೂತ್ರಾಲಯದ ಕೊಳಚೆ ನೀರು ತುಳಿದುಕೊಂಡೇ ಓಡಾಡುವ ದುಸ್ಥಿತಿ ಇದೆ.</p>.<p>ಮುದ್ದೇಬಿಹಾಳದಲ್ಲಿ ಬಸ್ ನಿಲ್ದಾಣ ಯಾವಾಗ ಆರಂಭವಾಯಿತೋ ಆವಾಗಿನಿಂದಲೂ ಈ ರಸ್ತೆ ಇದೆ. ಹಳೇಕೋರ್ಟ್, ಹಳೇ ಕಾಯಿಪಲ್ಲೆ ಮಾರುಕಟ್ಟೆ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮೀಪದಲ್ಲಿರುವ ರಸ್ತೆಯಿಂದ ಬಸ್ ನಿಲ್ದಾಣದೊಳಗೆ ಬರಬಹುದು. ಇಂದಿಗೂ ನಿತ್ಯವೂ ನೂರಾರು ಪ್ರಯಾಣಿಕರು ಇದೇ ರಸ್ತೆ ಬಳಸಿ ನಿಲ್ದಾಣಕ್ಕೆ ಬರುತ್ತಾರೆ.</p>.<p>ಆದರೆ ಈ ರಸ್ತೆಯಲ್ಲಿ ಬಸ್ ನಿಲ್ದಾಣದ ಬಲಭಾಗದಲ್ಲಿ ನಿರ್ಮಿಸಿರುವ ಮೂತ್ರಾಲಯದ ಕೊಳಚೆಯನ್ನು ರಸ್ತೆಯ ಮೇಲೆಯೇ ನೇರವಾಗಿ ಬಿಡಲಾಗುತ್ತಿದೆ. ಇದರಿಂದ ದುರ್ನಾತ ಹರಡಿದೆ. ಪ್ರಯಾಣಿಕರು ಈ ಕೊಳಚೆಯನ್ನು ತುಳಿದುಕೊಂಡೇ ನಿಲ್ದಾಣಕ್ಕೆ ಬರುತ್ತಿದ್ದಾರೆ. ನಂತರ ತಾವು ಬಾಟಲಿಯಲ್ಲಿ ತಂದಿರುವ ನೀರು ಹಾಕಿ ಕಾಲು ತೊಳೆದುಕೊಳ್ಳುತ್ತಾರೆ.</p>.<p>ಹಲವು ವರ್ಷಗಳಿಂದ ಮೂತ್ರಾಲಯದ ಕೊಳಚೆಯನ್ನು ನಿಲ್ದಾಣದಿಂದ ಜನರು ತಿರುಗಾಡುವ ರಸ್ತೆಯಲ್ಲಿ ಹರಿಬಿಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಕೊಚ್ಚೆಯಲ್ಲೇ ತಿರುಗಾಡುವ ಸ್ಥಿತಿ ಬಂದಿರುವುದು ಶೋಚನೀಯ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಖಾಜಾಹುಸೇನ್ ಹುನಕುಂಟಿ ತಿಳಿಸಿದ್ದಾರೆ.</p>.<p>ಯುಜಿಡಿ ಸಂಪರ್ಕ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಕೇಳಿ ಎರಡು ಬಾರಿ ಪತ್ರ ಬರೆದಿದ್ದೇವೆ. ಇನ್ನೊಮ್ಮೆ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇವೆ </p><p><strong>-ಎ.ಎಚ್. ಮದಭಾವಿ ಸಾರಿಗೆ ಘಟಕ ವ್ಯವಸ್ಥಾಪಕ</strong></p>.<p>ಮೂತ್ರಾಲಯದ ಕೊಳಚೆ ರಸ್ತೆಯ ಮೇಲೆ ಹರಿಯುತ್ತಿರುವ ಕುರಿತು ಪರಿಶೀಲನೆ ನಡೆಸುತ್ತೇನೆ. ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ </p><p><strong>-ಬಸವರಾಜ ಬಳಗಾನೂರ ಮುಖ್ಯಾಧಿಕಾರಿ ಪುರಸಭೆ</strong></p>.<p>Cut-off box - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ</strong>: ಇಲ್ಲಿಯ ಬಸ್ ನಿಲ್ದಾಣಕ್ಕೆ ಹಳೆ ಮಾರುಕಟ್ಟೆಯಿಂದ ಇರುವ ಒಳರಸ್ತೆಯಲ್ಲಿ ಮೂತ್ರಾಲಯದ ಕೊಳಚೆ ನೀರು ತುಳಿದುಕೊಂಡೇ ಓಡಾಡುವ ದುಸ್ಥಿತಿ ಇದೆ.</p>.<p>ಮುದ್ದೇಬಿಹಾಳದಲ್ಲಿ ಬಸ್ ನಿಲ್ದಾಣ ಯಾವಾಗ ಆರಂಭವಾಯಿತೋ ಆವಾಗಿನಿಂದಲೂ ಈ ರಸ್ತೆ ಇದೆ. ಹಳೇಕೋರ್ಟ್, ಹಳೇ ಕಾಯಿಪಲ್ಲೆ ಮಾರುಕಟ್ಟೆ, ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮೀಪದಲ್ಲಿರುವ ರಸ್ತೆಯಿಂದ ಬಸ್ ನಿಲ್ದಾಣದೊಳಗೆ ಬರಬಹುದು. ಇಂದಿಗೂ ನಿತ್ಯವೂ ನೂರಾರು ಪ್ರಯಾಣಿಕರು ಇದೇ ರಸ್ತೆ ಬಳಸಿ ನಿಲ್ದಾಣಕ್ಕೆ ಬರುತ್ತಾರೆ.</p>.<p>ಆದರೆ ಈ ರಸ್ತೆಯಲ್ಲಿ ಬಸ್ ನಿಲ್ದಾಣದ ಬಲಭಾಗದಲ್ಲಿ ನಿರ್ಮಿಸಿರುವ ಮೂತ್ರಾಲಯದ ಕೊಳಚೆಯನ್ನು ರಸ್ತೆಯ ಮೇಲೆಯೇ ನೇರವಾಗಿ ಬಿಡಲಾಗುತ್ತಿದೆ. ಇದರಿಂದ ದುರ್ನಾತ ಹರಡಿದೆ. ಪ್ರಯಾಣಿಕರು ಈ ಕೊಳಚೆಯನ್ನು ತುಳಿದುಕೊಂಡೇ ನಿಲ್ದಾಣಕ್ಕೆ ಬರುತ್ತಿದ್ದಾರೆ. ನಂತರ ತಾವು ಬಾಟಲಿಯಲ್ಲಿ ತಂದಿರುವ ನೀರು ಹಾಕಿ ಕಾಲು ತೊಳೆದುಕೊಳ್ಳುತ್ತಾರೆ.</p>.<p>ಹಲವು ವರ್ಷಗಳಿಂದ ಮೂತ್ರಾಲಯದ ಕೊಳಚೆಯನ್ನು ನಿಲ್ದಾಣದಿಂದ ಜನರು ತಿರುಗಾಡುವ ರಸ್ತೆಯಲ್ಲಿ ಹರಿಬಿಡುತ್ತಿರುವುದರಿಂದ ದುರ್ನಾತ ಬೀರುತ್ತಿದೆ. ಅಧಿಕಾರಿಗಳು ಕೂಡಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಕೊಚ್ಚೆಯಲ್ಲೇ ತಿರುಗಾಡುವ ಸ್ಥಿತಿ ಬಂದಿರುವುದು ಶೋಚನೀಯ ಸಂಗತಿ ಎಂದು ಸಾಮಾಜಿಕ ಕಾರ್ಯಕರ್ತ ಖಾಜಾಹುಸೇನ್ ಹುನಕುಂಟಿ ತಿಳಿಸಿದ್ದಾರೆ.</p>.<p>ಯುಜಿಡಿ ಸಂಪರ್ಕ ನೀಡುವಂತೆ ಪುರಸಭೆ ಅಧಿಕಾರಿಗಳಿಗೆ ಕೇಳಿ ಎರಡು ಬಾರಿ ಪತ್ರ ಬರೆದಿದ್ದೇವೆ. ಇನ್ನೊಮ್ಮೆ ಗಮನಕ್ಕೆ ತಂದು ಈ ಸಮಸ್ಯೆಗೆ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇವೆ </p><p><strong>-ಎ.ಎಚ್. ಮದಭಾವಿ ಸಾರಿಗೆ ಘಟಕ ವ್ಯವಸ್ಥಾಪಕ</strong></p>.<p>ಮೂತ್ರಾಲಯದ ಕೊಳಚೆ ರಸ್ತೆಯ ಮೇಲೆ ಹರಿಯುತ್ತಿರುವ ಕುರಿತು ಪರಿಶೀಲನೆ ನಡೆಸುತ್ತೇನೆ. ಒಳಚರಂಡಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ </p><p><strong>-ಬಸವರಾಜ ಬಳಗಾನೂರ ಮುಖ್ಯಾಧಿಕಾರಿ ಪುರಸಭೆ</strong></p>.<p>Cut-off box - </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>