ನನಗೊಂದು ಕಥೆ ನೆನಪಿಗೆ ಬರುತ್ತಿದೆ. ಒಬ್ಬ ಉಪಾಧ್ಯಾಯನು ಮಕ್ಕಳಿಗೆ ಅಂಕಗಣಿತ ಬೋಧಿಸುತ್ತಿದ್ದ. ಅವನೊಂದು ಲೆಕ್ಕವನ್ನು ಬಿಡಿಸಲು ಹೇಳಿದ. ನನ್ನ ಹತ್ತಿರ 12 ಕುರಿಗಳಿವೆ. ಅವುಗಳಲ್ಲಿ ಆರು ಬೇಲಿ ಹಾರಿಹೋದವು, ಉಳಿದದ್ದೆಷ್ಟು? ಅನೇಕ ಮಕ್ಕಳು ‘ಆರು’ ಎಂದರು. ಆದರೆ, ರೈತನ ಮಗನೊಬ್ಬ ಮೆತ್ತಗೆ ಹೇಳಿದ, ‘ಒಂದೂ ಉಳಿಯುವುದಿಲ್ಲ’ ಎಂದು. ಉಪಾಧ್ಯಾಯ ಹುಡುಗನನ್ನು ಅದು ಹೇಗೆಂದು ಪ್ರಶ್ನಿಸಿದಾಗ ಅವನೆಂದ, ಸಾರ್, ನಿಮಗೆ ಗಣಿತ ಗೊತ್ತಿರಬಹುದು. ಆದರೆ, ಕುರಿಗಳ ವಿಚಾರ ನನಗೆ ಗೊತ್ತು ಎಂದ. ಅಂದರೆ,ನಾವು ಕುರಿಗಳಂತೆ ಇನ್ನೊಬ್ಬರನ್ನು ಅನುಸರಿಸಬಾರದು.