<p><strong>ವಿಜಯಪುರ: </strong>ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್ 2019–20ನೇ ಸಾಲಿನಲ್ಲಿ ₹10.69 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ತಿಳಿಸಿದರು.</p>.<p>ಬ್ಯಾಂಕಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2018–19ನೇ ಸಾಲಿಗೆ ಹೋಲಿಸಿದರೆ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹2.34 ಕೋಟಿ ಲಾಭ ಕಡಿಮೆಯಾಗಿದೆ ಎಂದರು.</p>.<p>ಮುಖ್ಯಮಂತ್ರಿ ಕೋವಿಡ್ ನಿಧಿಗೆ ₹1ಕೋಟಿ, ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ಪರಿಹಾರನಿಧಿಗೆ ₹50 ಲಕ್ಷ, ಜಿಲ್ಲೆಯ 500 ಆಶಾ ಕಾರ್ಯಕರ್ತೆಯರಿಗೆ ₹15 ಲಕ್ಷ ಪ್ರೋತ್ಸಾಹಧನ ಹಾಗೂ ಸರ್ಕಾರ ಠೇವಣಿ ಮೇಲೆ ನೀಡುವ ಬಡ್ಡಿ ಪ್ರಮಾಣವನ್ನು ಕಡಿತ ಮಾಡಿದ ಕಾರಣಕ್ಕೆ ಬ್ಯಾಂಕಿನ ಲಾಭಾಂಶ ತುಸು ಕಡಿಮೆಯಾಗಿದೆ ಎಂದು ಹೇಳಿದರು.</p>.<p class="Subhead"><strong>‘ಅ’ ವರ್ಗದ ಬ್ಯಾಂಕ್:</strong>2020 ಮಾರ್ಚ್ 31ಕ್ಕೆ ಬ್ಯಾಂಕಿನ ದುಡಿಯುವ ಬಂಡವಾಳ ₹3291 ಕೋಟಿಯಷ್ಟು ಇದೆ. 2019–20ನೇ ಸಾಲಿನ ಬ್ಯಾಂಕಿನ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ‘ಅ’ ವರ್ಗದ ಬ್ಯಾಂಕನ್ನಾಗಿ ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.</p>.<p class="Subhead"><strong>₹1132 ಕೋಟಿ ಬೆಳೆ ಸಾಲ:</strong>ಜಿಲ್ಲೆಯ 2.08 ಲಕ್ಷ ರೈತರಿಗೆ ₹1132 ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ನೀಡಿದ್ದು, ಈ ಪೈಕಿ 2019–20ನೇ ಸಾಲಿನಲ್ಲಿ ಒಟ್ಟು 6873 ಹೊಸ ರೈತರಿಗೆ ₹50.16 ಕೋಟಿ ಸಾಲ ವಿತರಿಸಿದೆ. ರೈತರ ಅರ್ಹತೆ ಆಧರಿಸಿ ಕನಿಷ್ಠ ₹45 ಸಾವಿರ ಬೆಳೆ ಸಾಲ ನೀಡುವ ಮಿತಿಯನ್ನು ₹55 ಸಾವಿರಗಳಿಗೆ ಹೆಚ್ಚಿಸಿ ಸಾಲ ವಿತರಣೆ ಮಾಡಲಾಗಿದೆ. ಇದುವರೆಗೆ ₹98 ಕೋಟಿ ಹೆಚ್ಚುವರಿ ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.</p>.<p class="Subhead"><strong>ಐದು ಹೊಸ ಶಾಖೆ:</strong>ಜಿಲ್ಲೆಯಾದ್ಯಂತ ಒಟ್ಟು 42 ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. 2020ನೇ ಸಾಲಿನಲ್ಲಿ ವಿಜಯಪುರ ನಗರದ ಅಥಣಿ ರೋಡ್, ಧೂಳಖೇಡ, ಕನಮಡಿ, ಢವಳಗಿ ಮತ್ತು ಮುಳವಾಡದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ ಎಂದರು.</p>.<p>ಮಮದಾಪುರ, ನಾಗಠಾಣ, ಶಿವಣಗಿ, ಇಂಗಳೇಶ್ವರ, ಉಕ್ಕಲಿ, ಮುದ್ದೇಬಿಹಾಳ (ಮಹಿಳಾ), ಹಿರೂರ, ಹುಲ್ಲೂರ, ಹಿರೇಬೇವನೂರ ಮತ್ತು ಅಥರ್ಗಾ ಸೇರಿದಂತೆ ಹೊಸದಾಗಿ ಇನ್ನೂ 10 ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.</p>.<p>ಬ್ಯಾಂಕ್ ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತಮಾನೋತ್ಸವ ಭವನದ ನಿರ್ಮಾಣದೊಂದಿಗೆ ಶತಮಾನೋತ್ಸವ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಕೈಗೊಳ್ಳಲಾಗಿದೆ. ಆದರೆ, ಕೋವಿಡ್ ಪರಿಣಾಮ ಆಚರಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.</p>.<p class="Briefhead"><strong>ಸಹಕಾರ ಸಪ್ತಾಹ ಸಮಾರೋಪ ನ.20ಕ್ಕೆ</strong></p>.<p>ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ನವಂಬರ್ 14ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದ್ದು, ಸಮಾರೋಪ ಸಮಾರಂಭ ನ.20ರಂದು ವಿಜಯಪುರದಲ್ಲಿ ನಡೆಯಲಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.</p>.<p>ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಭಾಗವಹಿಸಲಿದ್ದಾರೆ. ರಾಜ್ಯದ ಸಹಕಾರಿಗಳಿಗೆ ಸನ್ಮಾನ ನಡೆಯಲಿದೆ. ಅದೇ ದಿನ ಬ್ಯಾಂಕಿನ ವಾರ್ಷಿಕ ಸಭೆ ನಡೆಸುವ ಉದ್ದೇಶವಿದೆ ಎಂದರು.</p>.<p class="Briefhead"><strong>ಆರೋಗ್ಯ ಇಲಾಖೆ ಅಧೋಗತಿಗೆ</strong></p>.<p>ಆರೋಗ್ಯ ಇಲಾಖೆಯು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇಲಾಖೆ ಅಧೋಗತಿಗೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವರೂ ಆದ ಶಿವಾನಂದ ಪಾಟೀಲ ಆರೋಪಿಸಿದರು.</p>.<p>ಕೋವಿಡ್ ಹೆಸರಲ್ಲಿ ಇತರೆ ರೋಗಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಉದಾಹರಣೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ 1300ಕ್ಕೂ ಅಧಿಕ ಜನರು ಹೊರರೋಗಿ ವಿಭಾಗಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು. ಆದರೆ, ಸದ್ಯ 200 ಜನರೂ ಬರುತ್ತಿಲ್ಲ. ಹೀಗಾಗಿ ಇತರೆ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.</p>.<p>ಕೋವಿಡ್ ಬಳಿಕ ಇದುವರೆಗೆ ರಾಜ್ಯದಲ್ಲಿ ಕೋವಿಡ್ನಿಂದ ಎಷ್ಟು ಜನ ಹಾಗೂ ಇತರೆ ಕಾಯಿಲೆಗಳಿಂದ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ಅಂಕಿ–ಅಂಶವನ್ನು ಸರ್ಕಾರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಜಿಲ್ಲಾಕೇಂದ್ರ ಸಹಕಾರ ಬ್ಯಾಂಕ್ 2019–20ನೇ ಸಾಲಿನಲ್ಲಿ ₹10.69 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ತಿಳಿಸಿದರು.</p>.<p>ಬ್ಯಾಂಕಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2018–19ನೇ ಸಾಲಿಗೆ ಹೋಲಿಸಿದರೆ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ₹2.34 ಕೋಟಿ ಲಾಭ ಕಡಿಮೆಯಾಗಿದೆ ಎಂದರು.</p>.<p>ಮುಖ್ಯಮಂತ್ರಿ ಕೋವಿಡ್ ನಿಧಿಗೆ ₹1ಕೋಟಿ, ಮುಖ್ಯಮಂತ್ರಿಗಳ ನೈಸರ್ಗಿಕ ವಿಕೋಪ ಪರಿಹಾರನಿಧಿಗೆ ₹50 ಲಕ್ಷ, ಜಿಲ್ಲೆಯ 500 ಆಶಾ ಕಾರ್ಯಕರ್ತೆಯರಿಗೆ ₹15 ಲಕ್ಷ ಪ್ರೋತ್ಸಾಹಧನ ಹಾಗೂ ಸರ್ಕಾರ ಠೇವಣಿ ಮೇಲೆ ನೀಡುವ ಬಡ್ಡಿ ಪ್ರಮಾಣವನ್ನು ಕಡಿತ ಮಾಡಿದ ಕಾರಣಕ್ಕೆ ಬ್ಯಾಂಕಿನ ಲಾಭಾಂಶ ತುಸು ಕಡಿಮೆಯಾಗಿದೆ ಎಂದು ಹೇಳಿದರು.</p>.<p class="Subhead"><strong>‘ಅ’ ವರ್ಗದ ಬ್ಯಾಂಕ್:</strong>2020 ಮಾರ್ಚ್ 31ಕ್ಕೆ ಬ್ಯಾಂಕಿನ ದುಡಿಯುವ ಬಂಡವಾಳ ₹3291 ಕೋಟಿಯಷ್ಟು ಇದೆ. 2019–20ನೇ ಸಾಲಿನ ಬ್ಯಾಂಕಿನ ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ‘ಅ’ ವರ್ಗದ ಬ್ಯಾಂಕನ್ನಾಗಿ ವರ್ಗೀಕರಿಸಲಾಗಿದೆ ಎಂದು ತಿಳಿಸಿದರು.</p>.<p class="Subhead"><strong>₹1132 ಕೋಟಿ ಬೆಳೆ ಸಾಲ:</strong>ಜಿಲ್ಲೆಯ 2.08 ಲಕ್ಷ ರೈತರಿಗೆ ₹1132 ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ನೀಡಿದ್ದು, ಈ ಪೈಕಿ 2019–20ನೇ ಸಾಲಿನಲ್ಲಿ ಒಟ್ಟು 6873 ಹೊಸ ರೈತರಿಗೆ ₹50.16 ಕೋಟಿ ಸಾಲ ವಿತರಿಸಿದೆ. ರೈತರ ಅರ್ಹತೆ ಆಧರಿಸಿ ಕನಿಷ್ಠ ₹45 ಸಾವಿರ ಬೆಳೆ ಸಾಲ ನೀಡುವ ಮಿತಿಯನ್ನು ₹55 ಸಾವಿರಗಳಿಗೆ ಹೆಚ್ಚಿಸಿ ಸಾಲ ವಿತರಣೆ ಮಾಡಲಾಗಿದೆ. ಇದುವರೆಗೆ ₹98 ಕೋಟಿ ಹೆಚ್ಚುವರಿ ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದರು.</p>.<p class="Subhead"><strong>ಐದು ಹೊಸ ಶಾಖೆ:</strong>ಜಿಲ್ಲೆಯಾದ್ಯಂತ ಒಟ್ಟು 42 ಶಾಖೆಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. 2020ನೇ ಸಾಲಿನಲ್ಲಿ ವಿಜಯಪುರ ನಗರದ ಅಥಣಿ ರೋಡ್, ಧೂಳಖೇಡ, ಕನಮಡಿ, ಢವಳಗಿ ಮತ್ತು ಮುಳವಾಡದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ ಎಂದರು.</p>.<p>ಮಮದಾಪುರ, ನಾಗಠಾಣ, ಶಿವಣಗಿ, ಇಂಗಳೇಶ್ವರ, ಉಕ್ಕಲಿ, ಮುದ್ದೇಬಿಹಾಳ (ಮಹಿಳಾ), ಹಿರೂರ, ಹುಲ್ಲೂರ, ಹಿರೇಬೇವನೂರ ಮತ್ತು ಅಥರ್ಗಾ ಸೇರಿದಂತೆ ಹೊಸದಾಗಿ ಇನ್ನೂ 10 ಶಾಖೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.</p>.<p>ಬ್ಯಾಂಕ್ ಸ್ಥಾಪನೆಯಾಗಿ ನೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶತಮಾನೋತ್ಸವ ಭವನದ ನಿರ್ಮಾಣದೊಂದಿಗೆ ಶತಮಾನೋತ್ಸವ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಕ್ರಮಕೈಗೊಳ್ಳಲಾಗಿದೆ. ಆದರೆ, ಕೋವಿಡ್ ಪರಿಣಾಮ ಆಚರಣೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.</p>.<p class="Briefhead"><strong>ಸಹಕಾರ ಸಪ್ತಾಹ ಸಮಾರೋಪ ನ.20ಕ್ಕೆ</strong></p>.<p>ರಾಜ್ಯ ಮಟ್ಟದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ನವಂಬರ್ 14ರಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದ್ದು, ಸಮಾರೋಪ ಸಮಾರಂಭ ನ.20ರಂದು ವಿಜಯಪುರದಲ್ಲಿ ನಡೆಯಲಿದೆ ಎಂದು ಶಿವಾನಂದ ಪಾಟೀಲ ತಿಳಿಸಿದರು.</p>.<p>ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಭಾಗವಹಿಸಲಿದ್ದಾರೆ. ರಾಜ್ಯದ ಸಹಕಾರಿಗಳಿಗೆ ಸನ್ಮಾನ ನಡೆಯಲಿದೆ. ಅದೇ ದಿನ ಬ್ಯಾಂಕಿನ ವಾರ್ಷಿಕ ಸಭೆ ನಡೆಸುವ ಉದ್ದೇಶವಿದೆ ಎಂದರು.</p>.<p class="Briefhead"><strong>ಆರೋಗ್ಯ ಇಲಾಖೆ ಅಧೋಗತಿಗೆ</strong></p>.<p>ಆರೋಗ್ಯ ಇಲಾಖೆಯು ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಇಲಾಖೆ ಅಧೋಗತಿಗೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಜಿ ಸಚಿವರೂ ಆದ ಶಿವಾನಂದ ಪಾಟೀಲ ಆರೋಪಿಸಿದರು.</p>.<p>ಕೋವಿಡ್ ಹೆಸರಲ್ಲಿ ಇತರೆ ರೋಗಿಗಳನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ. ಉದಾಹರಣೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ 1300ಕ್ಕೂ ಅಧಿಕ ಜನರು ಹೊರರೋಗಿ ವಿಭಾಗಕ್ಕೆ ನಿತ್ಯ ಭೇಟಿ ನೀಡುತ್ತಿದ್ದರು. ಆದರೆ, ಸದ್ಯ 200 ಜನರೂ ಬರುತ್ತಿಲ್ಲ. ಹೀಗಾಗಿ ಇತರೆ ರೋಗಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.</p>.<p>ಕೋವಿಡ್ ಬಳಿಕ ಇದುವರೆಗೆ ರಾಜ್ಯದಲ್ಲಿ ಕೋವಿಡ್ನಿಂದ ಎಷ್ಟು ಜನ ಹಾಗೂ ಇತರೆ ಕಾಯಿಲೆಗಳಿಂದ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬ ಅಂಕಿ–ಅಂಶವನ್ನು ಸರ್ಕಾರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>