‘ಕಾಡಿನಾಗಿನ ಮಂದಿ ನಾಡಿನಾಗ, ನಾಡಿನಾಗಿನ ಮಂದಿ ಕಾಡಿನಾಗ ಅದಾರ. ಕಾಡಿನಾಗಿನ ಮಂದಿ ಕಾಡಿನಾಗ ಇರಬೇಕು. ನಾಡಿನಾಗಿನ ಮಂದಿ ನಾಡಿನಾಗ ಇರಬೇಕು. ಅದ ಸಮವೃಷ್ಟಿ. ಮನಿಗೊಂದು ಗಿಡ, ಮನಿಗೊಂದ ಮರ ಇರಬೇಕು. ಧರೆ ಮೇಲೆ ಮರ ಇಲ್ಲವಾಗಿದೆ, ಸದ್ಭಾವ, ಸದ್ಭಕ್ತಿ, ನಿಷ್ಠೆ ಇಲ್ಲದ ಕಾರಣದಿಂದಾಗಿ, ಮಳೆ ಬೆಳೆ ಆಗಿಲ್ಲ, ಸದಾಶಿವನ ಸದ್ಭಕ್ತರು ಸಂಸ್ಕಾರ, ವೇಷ, ಸಂಭಾಷಣ, ಇರುವಿಕೆ, ಅರಿವಿಕೆ ಪರಿಶುದ್ಧವಾಗಿರಬೇಕು, ಭಾರತ ದೇಶದ ಸಂಸ್ಕೃತಿ ಅನ್ವಯ ಬದುಕಿ, ಸದಾಶಿವನ ಪ್ರೀತಿಗೆ ಪಾತ್ರರಾಗಿ, ಇನ್ನೊಬ್ಬರಿಗೆ ತೊಂದರೆ ಕೊಡದಂತೆ ಬದುಕಬೇಕು’ ಎಂದು ಶಿವಯ್ಯ ಸ್ವಾಮಿ ನುಡಿದರು.