<p><strong>ಇಂಡಿ:</strong> ‘ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ. ಹೀಗಾಗಿ ಮತ ಚಲಾಯಿಸುವಾಗ ಮತದಾರರು ಎಚ್ಚರವಹಿಸಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.</p>.<p>ನಗರದ ಆಡಳಿತಸೌಧದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ಕಾನೂನು ಅರಿವು –ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ‘ಅನೇಕ ಪ್ರಜ್ಞಾವಂತರು ಮತದಾನ ಮಾಡುತ್ತಿಲ್ಲ. ಮತದಾನ ದೇಶದ ಭವಿಷ್ಯ ರೂಪಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುತ್ತದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗಿಯಾಗಿ ಸಾಂವಿಧಾನಿಕ ಹಕ್ಕು ಚಲಾಯಿಸಬೇಕು’ ಎಂದರು.</p>.<p>ಇಒ ಭೀಮಾಶಂಕರ ಕನ್ನೂರ, ಬಸವರಾಜ ಗೊರನಾಳ ಮಾತನಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ವಿಕಾಸ ದಳವಾಯಿ ಮತ್ತು ಕಿರಿಯ ದಿವಾನಿ ನ್ಯಾಯಾಧೀಶ ಸುನೀಲ ಕುಮಾರ ಇದ್ದರು.</p>.<p>ಮತದಾನ ಜಾಗೃತಿ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದು ಹಾವಳಗಿ, ಎಸ್.ಆರ್.ಮುಂಜಗೊಂಡ, ಆರ್.ಬಿ ಮೂಗಿ, ಎಚ್.ಎಚ್. ಗುನ್ನಾಪುರ, ಪಂಡಿತ ಕೊಡಹೊನ್ನ ಅವರನ್ನು ಸನ್ಮಾನಿಸಲಾಯಿತು.</p>
<p><strong>ಇಂಡಿ:</strong> ‘ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೆ ಕಾರಣವಾಗುತ್ತದೆ. ಹೀಗಾಗಿ ಮತ ಚಲಾಯಿಸುವಾಗ ಮತದಾರರು ಎಚ್ಚರವಹಿಸಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ಹೇಳಿದರು.</p>.<p>ನಗರದ ಆಡಳಿತಸೌಧದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ಕಾನೂನು ಅರಿವು –ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಮಾತನಾಡಿ, ‘ಅನೇಕ ಪ್ರಜ್ಞಾವಂತರು ಮತದಾನ ಮಾಡುತ್ತಿಲ್ಲ. ಮತದಾನ ದೇಶದ ಭವಿಷ್ಯ ರೂಪಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸುತ್ತದೆ. ಹೀಗಾಗಿ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಭಾಗಿಯಾಗಿ ಸಾಂವಿಧಾನಿಕ ಹಕ್ಕು ಚಲಾಯಿಸಬೇಕು’ ಎಂದರು.</p>.<p>ಇಒ ಭೀಮಾಶಂಕರ ಕನ್ನೂರ, ಬಸವರಾಜ ಗೊರನಾಳ ಮಾತನಾಡಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ವಿಕಾಸ ದಳವಾಯಿ ಮತ್ತು ಕಿರಿಯ ದಿವಾನಿ ನ್ಯಾಯಾಧೀಶ ಸುನೀಲ ಕುಮಾರ ಇದ್ದರು.</p>.<p>ಮತದಾನ ಜಾಗೃತಿ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿದ್ದು ಹಾವಳಗಿ, ಎಸ್.ಆರ್.ಮುಂಜಗೊಂಡ, ಆರ್.ಬಿ ಮೂಗಿ, ಎಚ್.ಎಚ್. ಗುನ್ನಾಪುರ, ಪಂಡಿತ ಕೊಡಹೊನ್ನ ಅವರನ್ನು ಸನ್ಮಾನಿಸಲಾಯಿತು.</p>