ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಗ್ರಾಮಸ್ಥರು ‘ಸಾತನೂರು ಹೋಬಳಿಯ ನರಿಪುರ ಗ್ರಾಮದ ಸರ್ವೆ ಸಂಖ್ಯೆ 31,32, 34, 266, 49 ಹಾಗೂ ಆನುಮಾನಹಳ್ಳಿ ಸರ್ವೆ ಸಂಖ್ಯೆ 87ರಲ್ಲಿ ಸುಮಾರು 287 ಎಕರೆ ಗೋಮಾಳವಿದೆ. ಅಲ್ಲಿ ಕಲ್ಲು ಗಣಿಗಾರಿಕೆ ವಿರೋಧಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ. ಇತ್ತ ಆನುಮಾನಹಳ್ಳಿ ಸರ್ವೆ ಸಂಖ್ಯೆ 87ರಲ್ಲಿ ಕ್ರಷರ್ ಒಂದು ಕಾರ್ಯ ನಿರ್ವಹಿಸುತ್ತಿದೆ. ಆದರೆ ಅದಕ್ಕೆ ಸ್ಥಳೀಯ ಗ್ರಾ.ಪಂ. ನಿಂದ ನಿರಪೇಕ್ಷಣಾ ಪತ್ರವಾಗಲಿ, ಇಲಾಖೆಯಿಂದ ಅನುಮತಿ ಆಗಲಿ ಪಡೆದಿಲ್ಲ’ ಎಂದು ದೂರಿದರು.