ಐದು ತಿಂಗಳಿಂದ ವೇತನ ಬಾರದ ಕಾರಣ ದಸರಾ, ದೀಪಾವಳಿ ಹಾಗೂ ಶಿವರಾತ್ರಿ ಹಬ್ಬವನ್ನು ನಮ್ಮ ಕುಟುಂಬದ ಸದಸ್ಯರು ಆಚರಿಸದಂತೆ ಆಗಿದೆ. ಮಕ್ಕಳ ವಿದ್ಯಾಭ್ಯಾಸದ ಫೀ, ಮನೆ ಬಾಡಿಗೆ, ಔಷಧಿ ವೆಚ್ಚ ಹೀಗೆ ಸಾಲು ಸಾಲು ಸಮಸ್ಯೆಗಳು ನಮ್ಮನ್ನು ಬೆಂಬತ್ತಿವೆ. ಹಲವರು ತಿಂಗಳಿಂದ ನಮ್ಮ ವೇತನ ನಾಳೆ ಎಂಬ ಭರವಸೆಯಲ್ಲಿಯೇ ಐದು ತಿಂಗಳು ಕಾಲ ಕಳೆದುಕೊಂಡು ಬಂದಿದ್ದೇವೆ ಎಂದು ವೇತನ ವಂಚಿತ ಶಿಕ್ಷಕರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.