ಪ್ರತಿ ವರ್ಷ ಅಗಸ್ಟ್ ಮತ್ತು ಸೆಪ್ಟಂಬರ ತಿಂಗಳಲ್ಲಿ ಕೃಷ್ಣಾ ನದಿ ಪ್ರವಾಹ ಸಾಮಾನ್ಯ. ಆಗ ನಮಗೆ ನೆನಪಾಗುವುದು ಕೊಳ್ಳೂರು ಸೇತುವೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಪ್ರತಿ ವರ್ಷ ಪ್ರವಾಹ ಬಂದಾಗ ಸೇತುವೆಗೆ ಭೇಟಿ ನೀಡಿ ಸೇತುವೆ ಎತ್ತರಿಸಲು ಅಗತ್ಯ ಅಂದಾಜುಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಹೇಳಿ ಮೂಲಕ ಜಾರಿಕೊಳ್ಳುತ್ತಾರೆ. ಆದರೆ ಕಾರ್ಯಯೋಜನೆ ಮಾತ್ರ ಕೈಗೂಡುತ್ತಿಲ್ಲ. ನದಿಯ ನೀರನ್ನು ನಂಬಿ ಬದುಕು ಹಸನಾಗಲಿ ಎನ್ನುವ ಆಸೆಯಿಂದ ಜೀವನ ಸಾಗುಸುತ್ತಿರುವ ರೈತರಿಗೆ ಪ್ರವಾಹದ ರಕ್ಕಸ ನೀರಿನಿಂದ ಅದರಲ್ಲಿ ಬದುಕು ಮುಳುಗಿ ಹೋಗುತ್ತಲಿದೆ ಎನ್ನುತ್ತಾರೆ ರೈತ ಶಿರಸನಗೌಡ.