ಸುರಪುರ: ‘ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಶಾಸಕರು ತರಲು ಸಾಧ್ಯವಾಗದಷ್ಟು ಅನುದಾನ ತಂದಿದ್ದೇನೆ. ಅಭಿವೃದ್ಧಿಯ ಹೊಲೆಯನ್ನೇ ಹರಿಸಿದ್ದೇನೆ. ಅಭಿವೃದ್ಧಿಗಾಗಿಯೇ ಮತ್ತೊಮ್ಮೆ ನನಗೆ ಅವಕಾಶ ನೀಡಿ’ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ರಾಜೂಗೌಡ ಮನವಿ ಮಾಡಿದರು.
ತಾಲ್ಲೂಕಿನ ದೇವಿಕೇರಾ ಗ್ರಾಮದಲ್ಲಿ ಭಾನುವಾರ ಮತಯಾಚನೆ ಮಾಡಿ ಅವರು ಮಾತನಾಡಿದರು.
ಡಬಲ್ ಎಂಜಿನ್ ಸರ್ಕಾರ ಇದ್ದರೆ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತವೆ. ಮತದಾರರು ಯೋಚನೆ ಮಾಡಿ ಮತ ನೀಡಿ. ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದು ವಿನಂತಿಸಿದರು.
ರಾಜಾ ಹನುಮಪ್ಪನಾಯಕ ತಾತಾ, ಮರಿಲಿಂಗಪ್ಪನಾಯಕ ಕರ್ನಾಳ, ಬಲಭೀಮನಾಯಕ ಭೈರಿಮರಡಿ, ಸಾಹೇಬಗೌಡ ದೇವಿಕೇರಿ, ಮಲ್ಲನಗೌಡ ಪಾಟೀಲ ದೇವಿಕೇರಿ, ರಂಗನಗೌಡ ದೇವಿಕೇರಿ ಇತರರು ಇದ್ದರು.