<p><strong>ಬರೀ ಓಲೈಕೆ..</strong></p>.<p>ರಾಜ್ಯ ಬಜೆಟ್ ಜನರನ್ನು ಓಲೈಕೆ ಮಾಡಿದೆ. ಬಜೆಟ್ನಲ್ಲಿ ಘೋಷಣೆ ಆಗಿರುವ ಹೊಸ ಯೋಜನೆಗಳು ಪ್ರಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಈ ಬಜೆಟ್ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಿದೆ.<br /><strong>ಕಲ್ಪನಾ ಗುರಸಣಗಿ<br />ಮಹಿಳಾ ಹೋರಾಟಗಾತಿ, ಯಾದಗಿರಿ<br /><br />ಯಾದಗಿರಿ ಗಡೆಗಣನೆ</strong></p>.<p>ಆಳುವ ಸರ್ಕಾರಗಳು ಏಕೆ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸುತ್ತವೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಇನ್ನೆಷ್ಟು ದಿನ ಉತ್ತಮ ಯೋಜನೆಗಳಿಗಾಗಿ ಕಾಯಬೇಕು. ಸಮ್ಮಿಶ್ರ ಸರ್ಕಾರ ಇನ್ನಷ್ಟು ಉತ್ತಮ ಅಂಶಗಳನ್ನು ಹೊಂದಬೇಕಿತ್ತು.<br /><strong>ಚಂದ್ರಕಾಂತ ಕರದಳ್ಳಿ<br />ಸಾಹಿತಿ, ಶಹಾಪುರ<br /><br />ಪರವಾಗಿಲ್ಲ..</strong></p>.<p>ಬಜೆಟ್ ಪರವಾಗಿಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂದುವರಿದ ಜಿಲ್ಲೆಗಳಿಗೆಹೆಚ್ಚು ಒತ್ತು ನೀಡಿದ್ದಾರೆ. ಹಿಂದುಳಿದ ಜಿಲ್ಲೆಗಳನ್ನು ಪಟ್ಟಿ ಮಾಡಿ ವಿಶೇಷ ಯೋಜನೆ ನೀಡುವ ಕೆಲಸ ಮಾಡಬೇಕಿತ್ತು.<br /><strong>ಹಣಮೇಗೌಡ ಬೀರನಕಲ್<br />ಮುಖಂಡ, ಯಾದಗಿರಿ<br /><br />ಇದು ಸಾಹುಕಾರರ ಬಜೆಟ್</strong></p>.<p>ಪಡಿತರ ಚೀಟಿಯಲ್ಲಿ ವಿತರಣೆ ಆಗುತ್ತಿದ್ದ ಸೀಮೆಣ್ಣೆ, ರಾಗಿ ವಿತರಣೆ ಸ್ಥಗಿತಗೊಂಡಿದೆ. ಅಡುಗೆ ಅನಿಲಕೊಂಡು ಅಕ್ಕಿ ಬೇಯಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ. ಬಡವರ ಹಸಿವಿನ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್ನಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಇದು ಸಾಹುಕಾರರ ಬಜೆಟ್.<br /><strong>ಸಾಬಮ್ಮ ಅಲಿಪುರ<br />ಕೂಲಿ ಕಾರ್ಮಿಕ ಮಹಿಳೆ</strong></p>.<p><strong>ಗುಳೆ ನಿಯಂತ್ರಣ ವಿಶೇಷ ಯೋಜನೆ ಇಲ್ಲ</strong></p>.<p>ಹುಟ್ಟಿನಿಂದಲೂ ಗುಳೆಯಲ್ಲೇ ಬದುಕು ಸವೆಸಿದ್ದೇವೆ. ಮೂರು ವರ್ಷಗಳಿಂದ ಮಳೆ ಇಲ್ಲ. ಊರಲ್ಲಿ ಕುಡಿಯಲು ನೀರಿಲ್ಲ. ಜನರ ಸ್ಥಿತಿಗತಿ ಸುಧಾರಿಸುವ ವಿಶೇಷ ಯೋಜನೆ ಪ್ರಕಟಿಸಬೇಕಿತ್ತು. ಮುಖ್ಯಮಂತ್ರಿ ಬಡವರ ಮಗನಲ್ಲ. ಹಾಗಾಗಿ, ಬಡವರ ಬವಣೆ ನೀಗಿಸುವ ಯೋಜನೆ ಬಜೆಟ್ನಲ್ಲಿ ಇಲ್ಲ.<br /><strong>ತಾಯಮ್ಮ<br />ಲಾಡಸ್ಗಲ್ಲಿ, ಯಾದಗಿರಿ</strong><br /><br /><strong>ಖುಷಿತಂದ ಕ್ರೀಡಾ ವಸತಿ ಶಾಲೆ..</strong></p>.<p>ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ಇಲ್ಲದ ಕಾರಣ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಕಮರಿ ಹೋಗುತ್ತಿದ್ದಾರೆ. ಅಂತವರಿಗೆ ಸರ್ಕಾರ ಬಜೆಟ್ನಲ್ಲಿ ಕ್ರೀಡಾ ವಸತಿ ಶಾಲೆ ಘೋಷಿಸಿರುವುದು ಖುಷಿ ನೀಡಿದೆ.<br /><strong>ನಿರ್ಮಲಾ ಮಾರಿ<br />ಬ.ಎ. ಪದವಿ ತರಗತಿ ವಿದ್ಯಾರ್ಥಿನಿ<br />ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬರೀ ಓಲೈಕೆ..</strong></p>.<p>ರಾಜ್ಯ ಬಜೆಟ್ ಜನರನ್ನು ಓಲೈಕೆ ಮಾಡಿದೆ. ಬಜೆಟ್ನಲ್ಲಿ ಘೋಷಣೆ ಆಗಿರುವ ಹೊಸ ಯೋಜನೆಗಳು ಪ್ರಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಈ ಬಜೆಟ್ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಿದೆ.<br /><strong>ಕಲ್ಪನಾ ಗುರಸಣಗಿ<br />ಮಹಿಳಾ ಹೋರಾಟಗಾತಿ, ಯಾದಗಿರಿ<br /><br />ಯಾದಗಿರಿ ಗಡೆಗಣನೆ</strong></p>.<p>ಆಳುವ ಸರ್ಕಾರಗಳು ಏಕೆ ಯಾದಗಿರಿ ಜಿಲ್ಲೆಯನ್ನು ಕಡೆಗಣಿಸುತ್ತವೆ ಎಂಬುದು ಅರ್ಥವಾಗುತ್ತಿಲ್ಲ. ನಾವು ಇನ್ನೆಷ್ಟು ದಿನ ಉತ್ತಮ ಯೋಜನೆಗಳಿಗಾಗಿ ಕಾಯಬೇಕು. ಸಮ್ಮಿಶ್ರ ಸರ್ಕಾರ ಇನ್ನಷ್ಟು ಉತ್ತಮ ಅಂಶಗಳನ್ನು ಹೊಂದಬೇಕಿತ್ತು.<br /><strong>ಚಂದ್ರಕಾಂತ ಕರದಳ್ಳಿ<br />ಸಾಹಿತಿ, ಶಹಾಪುರ<br /><br />ಪರವಾಗಿಲ್ಲ..</strong></p>.<p>ಬಜೆಟ್ ಪರವಾಗಿಲ್ಲ. ಸಿಎಂ ಎಚ್.ಡಿ.ಕುಮಾರಸ್ವಾಮಿ ಮುಂದುವರಿದ ಜಿಲ್ಲೆಗಳಿಗೆಹೆಚ್ಚು ಒತ್ತು ನೀಡಿದ್ದಾರೆ. ಹಿಂದುಳಿದ ಜಿಲ್ಲೆಗಳನ್ನು ಪಟ್ಟಿ ಮಾಡಿ ವಿಶೇಷ ಯೋಜನೆ ನೀಡುವ ಕೆಲಸ ಮಾಡಬೇಕಿತ್ತು.<br /><strong>ಹಣಮೇಗೌಡ ಬೀರನಕಲ್<br />ಮುಖಂಡ, ಯಾದಗಿರಿ<br /><br />ಇದು ಸಾಹುಕಾರರ ಬಜೆಟ್</strong></p>.<p>ಪಡಿತರ ಚೀಟಿಯಲ್ಲಿ ವಿತರಣೆ ಆಗುತ್ತಿದ್ದ ಸೀಮೆಣ್ಣೆ, ರಾಗಿ ವಿತರಣೆ ಸ್ಥಗಿತಗೊಂಡಿದೆ. ಅಡುಗೆ ಅನಿಲಕೊಂಡು ಅಕ್ಕಿ ಬೇಯಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ. ಬಡವರ ಹಸಿವಿನ ಬಗ್ಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್ನಲ್ಲಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಇದು ಸಾಹುಕಾರರ ಬಜೆಟ್.<br /><strong>ಸಾಬಮ್ಮ ಅಲಿಪುರ<br />ಕೂಲಿ ಕಾರ್ಮಿಕ ಮಹಿಳೆ</strong></p>.<p><strong>ಗುಳೆ ನಿಯಂತ್ರಣ ವಿಶೇಷ ಯೋಜನೆ ಇಲ್ಲ</strong></p>.<p>ಹುಟ್ಟಿನಿಂದಲೂ ಗುಳೆಯಲ್ಲೇ ಬದುಕು ಸವೆಸಿದ್ದೇವೆ. ಮೂರು ವರ್ಷಗಳಿಂದ ಮಳೆ ಇಲ್ಲ. ಊರಲ್ಲಿ ಕುಡಿಯಲು ನೀರಿಲ್ಲ. ಜನರ ಸ್ಥಿತಿಗತಿ ಸುಧಾರಿಸುವ ವಿಶೇಷ ಯೋಜನೆ ಪ್ರಕಟಿಸಬೇಕಿತ್ತು. ಮುಖ್ಯಮಂತ್ರಿ ಬಡವರ ಮಗನಲ್ಲ. ಹಾಗಾಗಿ, ಬಡವರ ಬವಣೆ ನೀಗಿಸುವ ಯೋಜನೆ ಬಜೆಟ್ನಲ್ಲಿ ಇಲ್ಲ.<br /><strong>ತಾಯಮ್ಮ<br />ಲಾಡಸ್ಗಲ್ಲಿ, ಯಾದಗಿರಿ</strong><br /><br /><strong>ಖುಷಿತಂದ ಕ್ರೀಡಾ ವಸತಿ ಶಾಲೆ..</strong></p>.<p>ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ಇಲ್ಲದ ಕಾರಣ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಕಮರಿ ಹೋಗುತ್ತಿದ್ದಾರೆ. ಅಂತವರಿಗೆ ಸರ್ಕಾರ ಬಜೆಟ್ನಲ್ಲಿ ಕ್ರೀಡಾ ವಸತಿ ಶಾಲೆ ಘೋಷಿಸಿರುವುದು ಖುಷಿ ನೀಡಿದೆ.<br /><strong>ನಿರ್ಮಲಾ ಮಾರಿ<br />ಬ.ಎ. ಪದವಿ ತರಗತಿ ವಿದ್ಯಾರ್ಥಿನಿ<br />ಲಿಂಗೇರಿ ಕೋನಪ್ಪ ಮಹಿಳಾ ಕಾಲೇಜು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>