<p><strong>ಯಾದಗಿರಿ: </strong>ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘ ಆಗ್ರಹಿಸಿದೆ.</p>.<p>ಗುರುವಾರ ನಗರದ ಗುರುರಾಜ ಪರಿಮಳ ಮಂಟಪದಲ್ಲಿ ನವವೃಂದಾವನ ಗಡ್ಡಿಯಲ್ಲಿ ವೃಂದಾವನ ಧ್ವಂಸಗೊಳಿಸಿದ ಪ್ರಕರಣದ ಬಗ್ಗೆ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ರಾವ್ ಮುಂಡರಗಿ ಮಾತನಾಡಿದರು.</p>.<p>‘ವ್ಯಾಸರಾಜರು ಕನ್ನಡ ನಾಡಿನ ಮುಕುಟಪ್ರಾಯವಾದ ಹಂಪಿಯ ವಿಜಯನಗದ ಕೃಷ್ಣದೇವರಾಯನ ಆಸ್ಥಾನದ ರಾಜಗುರುಗಳಾಗಿದ್ದವರು. ಅಂತಹ ಯತಿಗಳ ವೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಹಿಂದೂ ಧರ್ಮ ಅನುಯಾಯಿಗಳಿಗೆ ನೋವು ತರಿಸಿದೆ’ ಎಂದು ಹೇಳಿದರು.</p>.<p>ಪಂಡಿತ ನರಸಿಂಹಾಚಾರ್ಯ ಪುರಾಣಿಕ ಮಾತನಾಡಿ, ‘ಈ ಘಟನೆ ಖಂಡಿಸಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.</p>.<p>ಶಂಕರನಾರಾಯಣ ಕುಲಕರ್ಣಿ, ಮುಖಂಡ ನರಸಿಂಹರಾವ್ ಕಿಲ್ಲನಕೇರಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ವ್ಯಾಸರಾಜರ ವೃಂದಾವನ ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಸರ್ಕಾರ ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘ ಆಗ್ರಹಿಸಿದೆ.</p>.<p>ಗುರುವಾರ ನಗರದ ಗುರುರಾಜ ಪರಿಮಳ ಮಂಟಪದಲ್ಲಿ ನವವೃಂದಾವನ ಗಡ್ಡಿಯಲ್ಲಿ ವೃಂದಾವನ ಧ್ವಂಸಗೊಳಿಸಿದ ಪ್ರಕರಣದ ಬಗ್ಗೆ ಹೋರಾಟ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ರಾವ್ ಮುಂಡರಗಿ ಮಾತನಾಡಿದರು.</p>.<p>‘ವ್ಯಾಸರಾಜರು ಕನ್ನಡ ನಾಡಿನ ಮುಕುಟಪ್ರಾಯವಾದ ಹಂಪಿಯ ವಿಜಯನಗದ ಕೃಷ್ಣದೇವರಾಯನ ಆಸ್ಥಾನದ ರಾಜಗುರುಗಳಾಗಿದ್ದವರು. ಅಂತಹ ಯತಿಗಳ ವೃಂದಾವನವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಹಿಂದೂ ಧರ್ಮ ಅನುಯಾಯಿಗಳಿಗೆ ನೋವು ತರಿಸಿದೆ’ ಎಂದು ಹೇಳಿದರು.</p>.<p>ಪಂಡಿತ ನರಸಿಂಹಾಚಾರ್ಯ ಪುರಾಣಿಕ ಮಾತನಾಡಿ, ‘ಈ ಘಟನೆ ಖಂಡಿಸಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.</p>.<p>ಶಂಕರನಾರಾಯಣ ಕುಲಕರ್ಣಿ, ಮುಖಂಡ ನರಸಿಂಹರಾವ್ ಕಿಲ್ಲನಕೇರಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>