<p><strong>ಗುರುಮಠಕಲ್ (ಯಾದಗಿರಿ):</strong> ತಾಲ್ಲೂಕಿನ ಎಲ್ಹೆರಿ ಗ್ರಾಮದ ಕಸ್ತೂರಿ ಬಾ ಬಾಲಿಕಾ ವಸತಿ ವಿದ್ಯಾಲಯ ಶಾಲೆಯಲ್ಲಿ 2017-18 ರಿಂದ 2022-23ರ ಅವಧಿಯಲ್ಲಿ ಶಿಕ್ಷಕಿಯಾಗಿದ್ದ ತಾಜು ಬಿ.ಎಂ. ಅವರ ವಿರುದ್ಧ ₹20 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರ ನಡೆಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಂಗಳವಾರ ಪ್ರಕರಣ ದಾಖಲಾಗಿದೆ.</p>.<p>ವಿವರ: ಶಿಕ್ಷಕಿ ತಾಜು ಬಿ.ಎಂ. ಅವರು ಎಸ್ಡಿಎಂಸಿ ನಡಾವಳಿಯಿಲ್ಲದೆ, ಸೂಕ್ತ ಕೋಟೇಶನ್ ಮತ್ತು ರಸೀದಿಗಳಿಲ್ಲದೆ, ಸ್ಥಳೀಯ ಅಂಗಡಿಗಳಿಂದ ಖರೀದಿಸುವ ನಿಯಮವಿದ್ದರೂ, ನಿಯಮ ಬಾಹಿರವಾಗಿ ಕಲಬುರಗಿ ನಗರದ ಖುಷಿ ಟ್ರೇಡಿಂಗ್ ಲಿಂಕ್ ಮತ್ತು ಕಸ್ತೂರಿಬಾ ಡಿಸ್ಟ್ರಿಬ್ಯೂಟರ್ ಅಲ್ಲಿ ಸಾಮಗ್ರಿ ಖರೀದಿಸಿದ್ದು, ಅವ್ಯವಹಾರ ನಡೆಸಿದ್ದಾರೆ.</p>.<p>ಈ ಕುರಿತು ಯಾದಗಿರಿ ಡಿಡಿಪಿಐ ಅವರು ಕೂಡಲೇ ಶಿಕ್ಷಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರಿಗೆ ನಿರ್ದೇಶನ ನೀಡಿದ್ದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರು ನೀಡಿದ ದೂರಿನಂತೆ ಶಿಕ್ಷಕಿ ತಾಜು ಬಿ.ಎಂ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<p>ಇದೇ ವಿಷಯಕ್ಕೆ ಸಂಬಂಧಿಸಿದಂತೆ 2024ರ ಜೂನ್ 26ರಂದು ಅಂದಿನ ಡಿಡಿಪಿಐ ಎಚ್.ಟಿ. ಮಂಜುನಾಥ ಅವರು ಶಿಕ್ಷಕಿ ತಾಜು ಬಿ.ಎಂ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿದ್ದರು. ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್ (ಯಾದಗಿರಿ):</strong> ತಾಲ್ಲೂಕಿನ ಎಲ್ಹೆರಿ ಗ್ರಾಮದ ಕಸ್ತೂರಿ ಬಾ ಬಾಲಿಕಾ ವಸತಿ ವಿದ್ಯಾಲಯ ಶಾಲೆಯಲ್ಲಿ 2017-18 ರಿಂದ 2022-23ರ ಅವಧಿಯಲ್ಲಿ ಶಿಕ್ಷಕಿಯಾಗಿದ್ದ ತಾಜು ಬಿ.ಎಂ. ಅವರ ವಿರುದ್ಧ ₹20 ಲಕ್ಷಕ್ಕೂ ಹೆಚ್ಚಿನ ಅವ್ಯವಹಾರ ನಡೆಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಂಗಳವಾರ ಪ್ರಕರಣ ದಾಖಲಾಗಿದೆ.</p>.<p>ವಿವರ: ಶಿಕ್ಷಕಿ ತಾಜು ಬಿ.ಎಂ. ಅವರು ಎಸ್ಡಿಎಂಸಿ ನಡಾವಳಿಯಿಲ್ಲದೆ, ಸೂಕ್ತ ಕೋಟೇಶನ್ ಮತ್ತು ರಸೀದಿಗಳಿಲ್ಲದೆ, ಸ್ಥಳೀಯ ಅಂಗಡಿಗಳಿಂದ ಖರೀದಿಸುವ ನಿಯಮವಿದ್ದರೂ, ನಿಯಮ ಬಾಹಿರವಾಗಿ ಕಲಬುರಗಿ ನಗರದ ಖುಷಿ ಟ್ರೇಡಿಂಗ್ ಲಿಂಕ್ ಮತ್ತು ಕಸ್ತೂರಿಬಾ ಡಿಸ್ಟ್ರಿಬ್ಯೂಟರ್ ಅಲ್ಲಿ ಸಾಮಗ್ರಿ ಖರೀದಿಸಿದ್ದು, ಅವ್ಯವಹಾರ ನಡೆಸಿದ್ದಾರೆ.</p>.<p>ಈ ಕುರಿತು ಯಾದಗಿರಿ ಡಿಡಿಪಿಐ ಅವರು ಕೂಡಲೇ ಶಿಕ್ಷಕಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರಿಗೆ ನಿರ್ದೇಶನ ನೀಡಿದ್ದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಜಿ. ಅವರು ನೀಡಿದ ದೂರಿನಂತೆ ಶಿಕ್ಷಕಿ ತಾಜು ಬಿ.ಎಂ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.</p>.<p>ಇದೇ ವಿಷಯಕ್ಕೆ ಸಂಬಂಧಿಸಿದಂತೆ 2024ರ ಜೂನ್ 26ರಂದು ಅಂದಿನ ಡಿಡಿಪಿಐ ಎಚ್.ಟಿ. ಮಂಜುನಾಥ ಅವರು ಶಿಕ್ಷಕಿ ತಾಜು ಬಿ.ಎಂ. ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತು ಮಾಡಿದ್ದರು. ಈಗ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>