ಗ್ರಾಮದಲ್ಲಿ 20 ದಿನದ ಹಿಂದೆ ಶುದ್ದ ಕುಡಿಯುವ ನೀರಿನ ಘಟಕ ಬಂದ್ ಆಗಿದ್ದರಿಂದ ಗ್ರಾಮದ ಜನತೆಯು ಕುಡಿಯುವ ನೀರಿಗೆ ನದಿಗೆ ತೆರಳುತ್ತಿದ್ದಾರೆ. ಮಹಿಳೆಯರು ಮತ್ತು ಚಿಕ್ಕ ಮಕ್ಕಳು ಹೆಚ್ಚಾಗಿ ನೀರು ತರಲು ಹೋದಾಗ ದಾಳಿ ಮಾಡಿ ಹಿಡಿಯುವ ಭೀತಿ ಉಂಟಾಗಿದೆ. ಅಲ್ಲದೆ ನದಿ ದಂಡೆಯ ಗದ್ದೆಯಲ್ಲಿಯೂ ಆಹಾರಕ್ಕಾಗಿ ಮೊಸಳೆ ಆಗಮಿಸುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮೊಸಳೆ ಸೆರೆ ಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.