<p><strong>ಸುರಪುರ</strong>: ನಗರದ ಪುರಾತನ ಬಯಲು ಹನುಮಾನ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸಹಸ್ರ ದೀಪೋತ್ಸವವು ಅದ್ದೂರಿಯಾಗಿ ನೆರವೇರಿತು.</p>.<p>ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಗ್ಯಾನ್ಚಂದ ಜೈನ್ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ದೀಪ ಬೆಳಕಿನ ಸಂಕೇತ. ಕತ್ತಲೆ, ಅಂಧಕಾರ ದೂರವಾಗಿ ಎಲ್ಲೆಲ್ಲೂ ಪ್ರಕಾಶ ಮೂಡಿ ಜೀವನ ಸಂತಸದಿಂದ ಅರಳುತ್ತದೆ’ ಎಂದು ಹೇಳಿದರು.</p>.<p>‘ದೇಗುಲಗಳಲ್ಲಿ ಪೂಜೆ, ಪುನಸ್ಕಾರ, ದೀಪೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂಸ್ಕಾರ ಬೆಳೆಯುತ್ತದೆ. ಕಾರಣ ತಾಯಿಂದಿರು ತಮ್ಮ ಚಿಕ್ಕಚಿಕ್ಕ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು’ ಎಂದು ಹೇಳಿದರು.</p>.<p>ಸಮಿತಿಯ ಅಧ್ಯಕ್ಷ ಅರವಿಂದಕುಮಾರ ಮಾತನಾಡಿ, ‘ದೀಪೋತ್ಸವದಲ್ಲಿ ಬಳಸುವ ಹತ್ತಿಯ ಬತ್ತಿ, ಎಣ್ಣೆ, ಹಣತೆ ಎಲ್ಲವೂ ಆರೋಗ್ಯದಾಯಕ. ದೀಪದಿಂದ ಉರಿಯುವ ಹೊಗೆಯಿಂದ ಪರಿಸರ ಶುದ್ಧವಾಗುತ್ತದೆ’ ಎಂದು ಹೇಳಿದರು.</p>.<p>ಪ್ರಧಾನ ಅರ್ಚಕ ಕೃಷ್ಣಭಟ್ಟ ಜೋಷಿ ಶ್ರೀರಾಮ ಕಥಾ ಶ್ರವಣ ಮಾಡಿದರು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿ, ರಾಮಧ್ಯಾನ ರಘುವೀರ ತೀರ್ಥ ಮಹಿಳಾ ಭಜನಾ ಮಂಡಳಿ ಸದಸ್ಯರು ದೇವರನಾಮ ಹಾಡಿದರು. ಭಕ್ತರಿಗೆ ಶ್ರೀರಾಮ ಪ್ರಸಾದ ಮತ್ತು ಪುಳಿಯೋಗರೆ ವಿತರಿಸಲಾಯಿತು.</p>.<p>ಸಮಿತಿ ಸದಸ್ಯರಾದ ಲಕ್ಷ್ಮೀನಾರಾಣ ಜೋಷಿ, ಕೃಷ್ಣ ದರಬಾರಿ, ರಾಘವೇಂದ್ರ ಭಕ್ರಿ, ವೆಂಕಟೇಶ ಹುದ್ದಾರ, ಸುಧೀರ ಕೋಸ್ಗಿ, ನಾರಾಯಣ ಕವಿತಾಳ, ಶ್ರೀನಿವಾಸ ಕಠಾರೆ, ಅಂಬರೇಶ ನಾಯ್ಕೋಡಿ, ಮಲ್ಲಿಕಾರ್ಜುನ ಹೊಟ್ಟಿ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುರಪುರ</strong>: ನಗರದ ಪುರಾತನ ಬಯಲು ಹನುಮಾನ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸಹಸ್ರ ದೀಪೋತ್ಸವವು ಅದ್ದೂರಿಯಾಗಿ ನೆರವೇರಿತು.</p>.<p>ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಗ್ಯಾನ್ಚಂದ ಜೈನ್ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ದೀಪ ಬೆಳಕಿನ ಸಂಕೇತ. ಕತ್ತಲೆ, ಅಂಧಕಾರ ದೂರವಾಗಿ ಎಲ್ಲೆಲ್ಲೂ ಪ್ರಕಾಶ ಮೂಡಿ ಜೀವನ ಸಂತಸದಿಂದ ಅರಳುತ್ತದೆ’ ಎಂದು ಹೇಳಿದರು.</p>.<p>‘ದೇಗುಲಗಳಲ್ಲಿ ಪೂಜೆ, ಪುನಸ್ಕಾರ, ದೀಪೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂಸ್ಕಾರ ಬೆಳೆಯುತ್ತದೆ. ಕಾರಣ ತಾಯಿಂದಿರು ತಮ್ಮ ಚಿಕ್ಕಚಿಕ್ಕ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು’ ಎಂದು ಹೇಳಿದರು.</p>.<p>ಸಮಿತಿಯ ಅಧ್ಯಕ್ಷ ಅರವಿಂದಕುಮಾರ ಮಾತನಾಡಿ, ‘ದೀಪೋತ್ಸವದಲ್ಲಿ ಬಳಸುವ ಹತ್ತಿಯ ಬತ್ತಿ, ಎಣ್ಣೆ, ಹಣತೆ ಎಲ್ಲವೂ ಆರೋಗ್ಯದಾಯಕ. ದೀಪದಿಂದ ಉರಿಯುವ ಹೊಗೆಯಿಂದ ಪರಿಸರ ಶುದ್ಧವಾಗುತ್ತದೆ’ ಎಂದು ಹೇಳಿದರು.</p>.<p>ಪ್ರಧಾನ ಅರ್ಚಕ ಕೃಷ್ಣಭಟ್ಟ ಜೋಷಿ ಶ್ರೀರಾಮ ಕಥಾ ಶ್ರವಣ ಮಾಡಿದರು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿ, ರಾಮಧ್ಯಾನ ರಘುವೀರ ತೀರ್ಥ ಮಹಿಳಾ ಭಜನಾ ಮಂಡಳಿ ಸದಸ್ಯರು ದೇವರನಾಮ ಹಾಡಿದರು. ಭಕ್ತರಿಗೆ ಶ್ರೀರಾಮ ಪ್ರಸಾದ ಮತ್ತು ಪುಳಿಯೋಗರೆ ವಿತರಿಸಲಾಯಿತು.</p>.<p>ಸಮಿತಿ ಸದಸ್ಯರಾದ ಲಕ್ಷ್ಮೀನಾರಾಣ ಜೋಷಿ, ಕೃಷ್ಣ ದರಬಾರಿ, ರಾಘವೇಂದ್ರ ಭಕ್ರಿ, ವೆಂಕಟೇಶ ಹುದ್ದಾರ, ಸುಧೀರ ಕೋಸ್ಗಿ, ನಾರಾಯಣ ಕವಿತಾಳ, ಶ್ರೀನಿವಾಸ ಕಠಾರೆ, ಅಂಬರೇಶ ನಾಯ್ಕೋಡಿ, ಮಲ್ಲಿಕಾರ್ಜುನ ಹೊಟ್ಟಿ ಇತರರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>