ಯಾದಗಿರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 54 ಪೈಕಿ 47 ಸ್ಥಾನಗಳಿಗೆ ಅವಿರೋಧ ಆಯ್ಕೆ ಮಾಡಲಾಯಿತು. 7 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಪ್ರೌಢಶಾಲಾ ವಿಭಾಗದಲ್ಲಿ ಸಾಯಪ್ಪ ಚಂಡರಕಿ, ಚಾಂದ್ ಸಾಬ್, ಜ್ಯೂನಿಯರ್ ಕಾಲೇಜು ವಿಭಾಗದಲ್ಲಿ ಗೂಳಿ, ಪಿಡಡ್ಲ್ಯೂಡಿ ಪಿಆರ್ ವಿಭಾಗದಲ್ಲಿ ಆರ್.ಎಸ್.ನಾಟೀಕರ, ವೆಂಕಟೇಶ, ಪಶುಸಂಗೋಪನೆ ಇಲಾಖೆ ಸಂಜೀವರೆಡ್ಡಿ, ಹಂಪೇಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಪಿ.ಮಲ್ಲಿಕಾರ್ಜುನ ತಿಳಿಸಿದ್ದಾರೆ.