<p><strong>ಯರಗೋಳ (ಯಾದಗಿರಿ ಜಿಲ್ಲೆ): </strong>ಶುಕ್ರವಾರ ರಾತ್ರಿ ಸುರಿದ ಜೋರಾದ ಮಳೆಯಿಂದಾಗಿ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಗ್ರಾಮಸ್ಥರು ಸಂತಸದಲ್ಲಿದ್ದಾರೆ. ಈ ಮುಂಚೆ 2010ರಲ್ಲಿ ಕೆರೆ ತುಂಬಿತ್ತು.</p>.<p>ಕಳೆದ ಹತ್ತು ವರ್ಷಗಳಿಂದಲೂ ಸತತ ಬರಗಾಲ, ಮಳೆ ಅಭಾವದಿಂದ ಕೆರೆ ತುಂಬದ ಕಾರಣ ರೈತರು ನಿರಾಶೆಯಲ್ಲಿದ್ದರು.</p>.<p>ನೂರಾರು ಸಂಖ್ಯೆಯಲ್ಲಿ ಯುವಕರು, ಜಿಟಿ ಜಿಟಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ, ಗೆಳೆಯರೊಂದಿಗೆ ಕೆರೆಯ ಕೋಡಿಯ ಮೇಲೆ ಹರಿಯುವ ನೀರಿನಲ್ಲಿ ನಿಂತು, ಮೊಬೈಲ್ ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.</p>.<p>ಗ್ರಾಮದ ಹಿರಿಯರಾದ ಸಾಹೇಬ್ ಗೌಡ ಗಾಂಪಲಿ ಮಾತನಾಡಿ, '10 ವರ್ಷಗಳ ನಂತರ ಕೆರೆ ತುಂಬಿದ್ದು, ರೈತರಿಗೆ ಸಂತಸ ತಂದಿದೆ. ಕೆರೆಗೆ ಹೊಸ ನೀರು ಬಂದಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ದೇವರುಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಗದ್ದೆಗಳಲ್ಲಿ ಭತ್ತದ ನಾಟಿ ಮಾಡುತ್ತೇವೆ' ಎಂದರು.</p>.<p>ಗ್ರಾಮದ ಸೂರ್ಯಕಾಂತ ಜೋಗಿ, ಸಾಬಣ್ಣ ಬಾನರ, ಮಲ್ಲಿಕಾರ್ಜುನ ಬಳ್ಳೊಳ್ಳಿ, ವಿಜಯಕುಮಾರ ದಿಬ್ಬಾ, ರಾಕೇಶ್, ಸೋಮನಾಥ ಪೊಲೀಸ್ ಪಾಟೀಲ, ಸಿದ್ದು ಬನ್ನಟ್ಟಿ, ಲಕ್ಷ್ಮಣ ಹತ್ತಿಕುಣಿ, ರಾಘವೇಂದ್ರ ಹಿರಿಕೇರಿ ಸೇರಿದಂತೆ ಅನೇಕರು ಇದ್ದರು.</p>.<p><strong>ಕೆರೆಯ ಅಂಕಿ- ಅಂಶಗಳು</strong></p>.<p>*24 ಚದರ ಕಿಲೋ ಮೀಟರ್ ಕೆರೆಯ ಜಲಾನಯನ ಪ್ರದೇಶ.</p>.<p>*129.28 ಹೆಕ್ಟೇರ್ ನೀರು ನಿಲ್ಲುವ ಪ್ರದೇಶ</p>.<p>* 5.08 ಕ್ಯುಬೆಕ್ ಮೀಟರ್ ನೀರಿನ ಸಾಮರ್ಥ್ಯ</p>.<p>* 364 ಮೀಟರ್ ಕೆರೆಯ ಒಡ್ಡು ಪ್ರದೇಶ,</p>.<p>*202 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಸೌಲತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯರಗೋಳ (ಯಾದಗಿರಿ ಜಿಲ್ಲೆ): </strong>ಶುಕ್ರವಾರ ರಾತ್ರಿ ಸುರಿದ ಜೋರಾದ ಮಳೆಯಿಂದಾಗಿ ಗ್ರಾಮದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಗ್ರಾಮಸ್ಥರು ಸಂತಸದಲ್ಲಿದ್ದಾರೆ. ಈ ಮುಂಚೆ 2010ರಲ್ಲಿ ಕೆರೆ ತುಂಬಿತ್ತು.</p>.<p>ಕಳೆದ ಹತ್ತು ವರ್ಷಗಳಿಂದಲೂ ಸತತ ಬರಗಾಲ, ಮಳೆ ಅಭಾವದಿಂದ ಕೆರೆ ತುಂಬದ ಕಾರಣ ರೈತರು ನಿರಾಶೆಯಲ್ಲಿದ್ದರು.</p>.<p>ನೂರಾರು ಸಂಖ್ಯೆಯಲ್ಲಿ ಯುವಕರು, ಜಿಟಿ ಜಿಟಿ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ, ಗೆಳೆಯರೊಂದಿಗೆ ಕೆರೆಯ ಕೋಡಿಯ ಮೇಲೆ ಹರಿಯುವ ನೀರಿನಲ್ಲಿ ನಿಂತು, ಮೊಬೈಲ್ ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಫೇಸ್ ಬುಕ್, ವಾಟ್ಸ್ ಆ್ಯಪ್ ಗಳಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.</p>.<p>ಗ್ರಾಮದ ಹಿರಿಯರಾದ ಸಾಹೇಬ್ ಗೌಡ ಗಾಂಪಲಿ ಮಾತನಾಡಿ, '10 ವರ್ಷಗಳ ನಂತರ ಕೆರೆ ತುಂಬಿದ್ದು, ರೈತರಿಗೆ ಸಂತಸ ತಂದಿದೆ. ಕೆರೆಗೆ ಹೊಸ ನೀರು ಬಂದಿದ್ದು, ಮುಂದಿನ ದಿನಗಳಲ್ಲಿ ಗ್ರಾಮದ ದೇವರುಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿ, ಗದ್ದೆಗಳಲ್ಲಿ ಭತ್ತದ ನಾಟಿ ಮಾಡುತ್ತೇವೆ' ಎಂದರು.</p>.<p>ಗ್ರಾಮದ ಸೂರ್ಯಕಾಂತ ಜೋಗಿ, ಸಾಬಣ್ಣ ಬಾನರ, ಮಲ್ಲಿಕಾರ್ಜುನ ಬಳ್ಳೊಳ್ಳಿ, ವಿಜಯಕುಮಾರ ದಿಬ್ಬಾ, ರಾಕೇಶ್, ಸೋಮನಾಥ ಪೊಲೀಸ್ ಪಾಟೀಲ, ಸಿದ್ದು ಬನ್ನಟ್ಟಿ, ಲಕ್ಷ್ಮಣ ಹತ್ತಿಕುಣಿ, ರಾಘವೇಂದ್ರ ಹಿರಿಕೇರಿ ಸೇರಿದಂತೆ ಅನೇಕರು ಇದ್ದರು.</p>.<p><strong>ಕೆರೆಯ ಅಂಕಿ- ಅಂಶಗಳು</strong></p>.<p>*24 ಚದರ ಕಿಲೋ ಮೀಟರ್ ಕೆರೆಯ ಜಲಾನಯನ ಪ್ರದೇಶ.</p>.<p>*129.28 ಹೆಕ್ಟೇರ್ ನೀರು ನಿಲ್ಲುವ ಪ್ರದೇಶ</p>.<p>* 5.08 ಕ್ಯುಬೆಕ್ ಮೀಟರ್ ನೀರಿನ ಸಾಮರ್ಥ್ಯ</p>.<p>* 364 ಮೀಟರ್ ಕೆರೆಯ ಒಡ್ಡು ಪ್ರದೇಶ,</p>.<p>*202 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ಸೌಲತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>