ಯಾದಗಿರಿ ವೃತ್ತ ವ್ಯಾಪ್ತಿಯಲ್ಲಿ ದಾಖಲಾದ ಸ್ವತ್ತಿನ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ, ಉಪ ವಿಭಾಗದ ಡಿವೈಎಸ್ಪಿ ಶರಣಪ್ಪ ಯು. ಮಾರ್ಗದರ್ಶನದಲ್ಲಿ ಸಿಪಿಐ ಶರಣಗೌಡ ಶರಣಗೌಡ ಎಂ. ನ್ಯಾಮಣ್ಣವರ, ವಡಗೇರಾ ಪೊಲೀಸ್ ಠಾಣೆಯ ಪಿ.ಎಸ್.ಐ ಸಿದರಾಯ ಬಳೂರ್ಗಿ, ಎಚ್ಸಿರಾಜಕುಮಾರ, ಮಹೇಂದ್ರ, ಯಾದಗಿರಿ ನಗರ ಠಾಣೆಯ ಗಜೇಂದ್ರ ಹಾಗೂ ಗುರುಮಠಕಲ್ ಠಾಣೆಯ ಗಣಪತಿ ಎಚ್.ಸಿ ಇವರನ್ನೊಳಗೊಂಡ ವಿಶೇಷ ತಂಡದ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣ ಪತ್ತೆ ಮಾಡಿದ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.