ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ದಲಿತರ ಮನೆಯಲ್ಲಿ ಸಚಿವ ಪೂಜಾರಿ ಉಪಾಹಾರ ಸೇವನೆ

Last Updated 6 ಫೆಬ್ರುವರಿ 2023, 6:42 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮುದ್ನಾಳ ಗ್ರಾಮದ ಪರಿಶಿಷ್ಟ ಜಾತಿಯ ಹಣಮಂತ ಎಂಬುವರ ಮನೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಾಹಾರ ಸೇವಿಸಿದರು.

ಸಚಿವರಿಗೆ ಆರತಿ ಬೆಳಗಿ ಕುಟುಂಬಸ್ಥರು ಸ್ವಾಗತಿಸಿದರು.

ಇಡ್ಲಿ, ವಡಾ, ಸುಸಲಾ ಹಾಗೂ ಮಿರ್ಜಿ ಬಜ್ಜಿ ಸವಿದರು.

ಸಚಿವರಿಗೆ ಶಾಸಕ ವೆಂಕಟರಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ ನಾಯ್ಕ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು.

ನಂತರ ಅದೇ ಗ್ರಾಮದ ಕುಂಬಾರರ ಸಮಸ್ಯೆ ಆಲಿಸಿದ ಸಚಿವರು, ಬಿಜೆಪಿ ಚಿನ್ಹೆ ಇರುವ ಮಣ್ಣಿನ ನೀರಿನ ಬಾಟಲ್ ವೀಕ್ಷಿಸಿದರು.
ನಂತರ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರ ಪುರಾತನ ಕಾಲದ ಮನೆ ವೀಕ್ಷಣೆ ಮಾಡಿದರು.

ನಂತರ ಮುದ್ನಾಳ ಗ್ರಾಮದ ರೈತರ ಜಮೀನಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿ ಕೊರೆಸಲು ಸಚಿವರು ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT