ಪತ್ರಿಕಾ ಪ್ರಕಟಣೆ ನೀಡಿದ ಅವರು, ಸರ್ಕಾರವು ಗುರುಮಠಕಲ್ ತಾಲ್ಲೂಕನ್ನೂ ಪ್ರವಾಹಪೀಡಿತ ಎಂದು ಪರಿಗಣಿಸಿದ್ದಕ್ಕೆ ಧನ್ಯವಾ ಸಲ್ಲಿಸುತ್ತೇನೆ. ತಾಲ್ಲೂಕು ವ್ಯಾಪ್ತಿಯಲ್ಲೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 45,108 ಹೆಕ್ಟೇರ್ ಮುಂಗಾರು ಬಿತ್ತನೆಯಾಗಿತ್ತು. ಅದರಲ್ಲಿ 20,344 ಹೆಕ್ಟೇರ್ ಹತ್ತಿ, 12,265 ಹೆಕ್ಟೇರ್ ತೊಗರಿ, 6,924 ಹೆಕ್ಟೇರ್ ಹೆಸರು ಹಾಗೂ 4626 ಹೆಕ್ಟೇರ್ ಭತ್ತ ಒಳಗೊಂಡಿದೆ. ಈ ಬಾರಿ ವಾಡಿಕೆಯ ಪ್ರಮಾಣಕ್ಕಿಂತ ಶೇ 88ರಷ್ಟು (295 ಮಿ.ಮೀ) ಹೆಚ್ಚುವರಿ ಮಳೆ ಆಗಿರುವುದರಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ ಎಂದು ತಿಳಿಸಿದ್ದಾರೆ.