<p>ಹುಣಸಗಿ: ಬಂಗಾರದ ಒಡವೆಯನ್ನು ಒತ್ತೆ ಇಟ್ಟುಕೊಂಡ ವಿಷಯದ ಕುರಿತಂತೆ ಆರಂಭವಾದ ಜಗಳ ಕೊಲೆಯೊಂದಿಗೆ ಅಂತ್ಯವಾದ ಘಟನೆ ಸೋಮವಾರ ರಾತ್ರಿ ಹುಣಸಗಿ ತಾಂಡಾದಲ್ಲಿ ನಡೆದಿದೆ.</p>.<p>ಹುಣಸಗಿ ತಾಂಡಾದ ಶಾಂತಾನಾಯಕ ರಾಠೋಡ (45) ಕೊಲೆಯಾದ ವ್ಯಕ್ತಿ.</p>.<p>ಸೋಮವಾರ ರಾತ್ರಿ ಈ ಬಂಗಾರದ ಒಡವೆ (ಬೋರಮಳಾ)ವನ್ನು ಒತ್ತೆ ಇಟ್ಟುಕೊಂಡ ವಿಷಯದಲ್ಲಿ ಕೊಲೆಯಾದ ಶಾಂತಾನಾಯಕ, ಪತ್ನಿ ಮಂಜುಳಾ, ಮಗ ಗುಂಡು ಹಾಗೂ ಆರೋಪಿಗಳಾದ ತಿಪ್ಪನಾಯಕ ರಾಠೋಡನೊಂದಿಗೆ ಬಾಯಿ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿದೆ.</p>.<p>ಮೃತನ ಪತ್ನಿ ಮಂಜುಳಾ ಶಾಂತಾನಾಯಕ ರಾಠೋಡ್ ನೀಡಿರುವ ದೂರಿನ ಆಧಾರದಲ್ಲಿ ತಿಪ್ಪಾನಾಯಕ ರಾಠೋಡ್, ಮಹಾಂತುನಾಯಕ ರಾಠೋಡ್ ಹಾಗೂ ಮಂಜುಬಾಯಿ ರಾಠೋಡ್ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇವರಲ್ಲಿ ಆರೋಪಿ ತಿಪ್ಪನಾಯಕನನ್ನು ಬಂಧಿಸಲಾಗಿದೆ ಎಂದು ಹುಣಸಗಿ ಪಿಎಸ್ಐ ಬಾಪುಗೌಡ ಪಾಟೀಲ<br />ಅವರು ತಿಳಿಸಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ಸಿಪಿಐ ದೌಲತ್ ಎನ್.ಕೆ, ಪಿಎಸ್ಐ ಬಾಪುಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸಗಿ: ಬಂಗಾರದ ಒಡವೆಯನ್ನು ಒತ್ತೆ ಇಟ್ಟುಕೊಂಡ ವಿಷಯದ ಕುರಿತಂತೆ ಆರಂಭವಾದ ಜಗಳ ಕೊಲೆಯೊಂದಿಗೆ ಅಂತ್ಯವಾದ ಘಟನೆ ಸೋಮವಾರ ರಾತ್ರಿ ಹುಣಸಗಿ ತಾಂಡಾದಲ್ಲಿ ನಡೆದಿದೆ.</p>.<p>ಹುಣಸಗಿ ತಾಂಡಾದ ಶಾಂತಾನಾಯಕ ರಾಠೋಡ (45) ಕೊಲೆಯಾದ ವ್ಯಕ್ತಿ.</p>.<p>ಸೋಮವಾರ ರಾತ್ರಿ ಈ ಬಂಗಾರದ ಒಡವೆ (ಬೋರಮಳಾ)ವನ್ನು ಒತ್ತೆ ಇಟ್ಟುಕೊಂಡ ವಿಷಯದಲ್ಲಿ ಕೊಲೆಯಾದ ಶಾಂತಾನಾಯಕ, ಪತ್ನಿ ಮಂಜುಳಾ, ಮಗ ಗುಂಡು ಹಾಗೂ ಆರೋಪಿಗಳಾದ ತಿಪ್ಪನಾಯಕ ರಾಠೋಡನೊಂದಿಗೆ ಬಾಯಿ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿದೆ.</p>.<p>ಮೃತನ ಪತ್ನಿ ಮಂಜುಳಾ ಶಾಂತಾನಾಯಕ ರಾಠೋಡ್ ನೀಡಿರುವ ದೂರಿನ ಆಧಾರದಲ್ಲಿ ತಿಪ್ಪಾನಾಯಕ ರಾಠೋಡ್, ಮಹಾಂತುನಾಯಕ ರಾಠೋಡ್ ಹಾಗೂ ಮಂಜುಬಾಯಿ ರಾಠೋಡ್ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇವರಲ್ಲಿ ಆರೋಪಿ ತಿಪ್ಪನಾಯಕನನ್ನು ಬಂಧಿಸಲಾಗಿದೆ ಎಂದು ಹುಣಸಗಿ ಪಿಎಸ್ಐ ಬಾಪುಗೌಡ ಪಾಟೀಲ<br />ಅವರು ತಿಳಿಸಿದ್ದಾರೆ.</p>.<p>ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ಸಿಪಿಐ ದೌಲತ್ ಎನ್.ಕೆ, ಪಿಎಸ್ಐ ಬಾಪುಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>