ಒಡವೆಗಾಗಿ ಜಗಳ: ಕೊಲೆಯಲ್ಲಿ ಅಂತ್ಯ
ಹುಣಸಗಿ: ಬಂಗಾರದ ಒಡವೆಯನ್ನು ಒತ್ತೆ ಇಟ್ಟುಕೊಂಡ ವಿಷಯದ ಕುರಿತಂತೆ ಆರಂಭವಾದ ಜಗಳ ಕೊಲೆಯೊಂದಿಗೆ ಅಂತ್ಯವಾದ ಘಟನೆ ಸೋಮವಾರ ರಾತ್ರಿ ಹುಣಸಗಿ ತಾಂಡಾದಲ್ಲಿ ನಡೆದಿದೆ.
ಹುಣಸಗಿ ತಾಂಡಾದ ಶಾಂತಾನಾಯಕ ರಾಠೋಡ (45) ಕೊಲೆಯಾದ ವ್ಯಕ್ತಿ.
ಸೋಮವಾರ ರಾತ್ರಿ ಈ ಬಂಗಾರದ ಒಡವೆ (ಬೋರಮಳಾ)ವನ್ನು ಒತ್ತೆ ಇಟ್ಟುಕೊಂಡ ವಿಷಯದಲ್ಲಿ ಕೊಲೆಯಾದ ಶಾಂತಾನಾಯಕ, ಪತ್ನಿ ಮಂಜುಳಾ, ಮಗ ಗುಂಡು ಹಾಗೂ ಆರೋಪಿಗಳಾದ ತಿಪ್ಪನಾಯಕ ರಾಠೋಡನೊಂದಿಗೆ ಬಾಯಿ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿದೆ.
ಮೃತನ ಪತ್ನಿ ಮಂಜುಳಾ ಶಾಂತಾನಾಯಕ ರಾಠೋಡ್ ನೀಡಿರುವ ದೂರಿನ ಆಧಾರದಲ್ಲಿ ತಿಪ್ಪಾನಾಯಕ ರಾಠೋಡ್, ಮಹಾಂತುನಾಯಕ ರಾಠೋಡ್ ಹಾಗೂ ಮಂಜುಬಾಯಿ ರಾಠೋಡ್ ಸೇರಿ ಮೂವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಇವರಲ್ಲಿ ಆರೋಪಿ ತಿಪ್ಪನಾಯಕನನ್ನು ಬಂಧಿಸಲಾಗಿದೆ ಎಂದು ಹುಣಸಗಿ ಪಿಎಸ್ಐ ಬಾಪುಗೌಡ ಪಾಟೀಲ
ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ವೇದಮೂರ್ತಿ, ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಹಾಗೂ ಸಿಪಿಐ ದೌಲತ್ ಎನ್.ಕೆ, ಪಿಎಸ್ಐ ಬಾಪುಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.