ಸಾರ್ವಜನಿಕ ಆಸ್ಪತ್ರೆಯ 50 ಮತ್ತು ಖಾಸಗಿ ಆಸ್ಪತ್ರೆಯಲಿ ದಾಖಲಾಗಿರುವ 30 ಜನರು ಸೇರಿ 80ಕ್ಕೂ ಹೆಚ್ಚು ಸೋಂಕಿತರಿಗೆ ಪೌಷ್ಠಿಕ ಆಹಾರದ ಪೊಟ್ಟಣ ನೀಡಿದರು. ಪ್ರತಿ ಪೊಟ್ಟಣದಲ್ಲಿ ತಲಾ 100 ಗ್ರಾಂ ಬದಾಮಿ, ಒಣದ್ರಾಕ್ಷಿ, ಗೋಡಂಬಿ, ಆಕ್ರೋಟ್ ಇದ್ದವು. ಇನ್ನೊಂದು ಪೊಟ್ಟಣದಲ್ಲಿ ಹೆಸರು, ಉರುಳಿ, ಕಡಲೆ, ಮೊಳಕೆ ಕಾಳು ಮತ್ತು ಸೇಬು, ಅಂಜೂರ, ಆರೆಂಜ್, ಪಪ್ಪಾಯಿ, ಚಿಕ್ಕು, ಕರಬೂಜ, ಕಲ್ಲಂಗಡಿ, ಬಾಳೆ ಸೇರಿದಂತೆ ಇತರೆ ಹಣ್ಣುಗಳ ಪೊಟ್ಟಣ ವಿತರಿಸಿದರು. ಮಧುಮೇಹ ರೋಗಿಗಳಿಗೆ ಸುಗರ್ಲೆಸ್ ಬಿಸ್ಕಿಟ್ ಪ್ಯಾಕೇಟ್ ನೀಡಿದರು.