ಯರಗೋಳ: ಸಮೀಪದ ಕಂಚಗಾರಳ್ಳಿ ತಾಂಡಕ್ಕೆ ಗುರುವಾರ ಬಸ್ ಸಂಚಾರ ಆರಂಭಗೊಂಡಿದ್ದು, ತಾಂಡಾ ನಿವಾಸಿಗಳ ಹಲವು ವರ್ಷಗಳಕನಸು ನನಸಾಗಿದೆ.
ತಾಂಡಾಕ್ಕೆ ಬಸ್ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಬಸ್ಗೆ ಪೂಜೆ ನೆರವೇರಿಸಿ ಸ್ವಾಗತಿಸಿದರು. ಬಸ್ ಚಾಲಕರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಸಂಭ್ರಮಿಸಿದರು.
ನಂತರ ವಿದ್ಯಾರ್ಥಿಗಳು ಬಸ್ನಲ್ಲಿ ಕುಳಿತು ಯಾದಗಿರಿ ನಗರಕ್ಕೆ ಪ್ರಯಾಣ ಬೆಳೆಸಿದರು.
‘ಮೇಲಧಿಕಾರಿಗಳ ಆದೇಶದಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿದಿನ ಬೆಳಿಗ್ಗೆ 8ರಿಂದ ಕಂಚುಗಾರಹಳ್ಳಿ ತಾಂಡಾಗೆ ಬಸ್ ಆಗಮಿಸಲಿದೆ. ಯಾದಗಿರಿಯಿಂದ ಸಂಜೆ 5.15ಕ್ಕೆ ತಾಂಡಾ ತಲುಪಲಿದೆ ಎಂದರು.
ಈ ವೇಳೆ ಪಪ್ಯಾ ಚವ್ಹಾಣ್ ಸಂತೋಷ ಚವ್ಹಾಣ್, ರಾಜು ರಾಠೋಡ್, ಸೋಮು ರಾಠೋಡ್, ಸಂಜಯ್ ರಾಠೋಡ್, ದೇವರಾಮ್ ರಾಠೋಡ್, ಸಚಿನ್ ಚವಾಣ್, ಯುವಕರು ಉಪಸ್ಥಿತರಿದ್ದರು. ಬಸ್ ಚಾಲಕರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಸಂಭ್ರಮಿಸಿದರು.