ಆ.22ರ ರಾತ್ರಿಯೇ ಚಿರತೆ ಸೆರೆಗೆ ಗುರುಮಠಕಲ್ನಿಂದ ಬೋನ್ ತಂದು ನಿರ್ದಿಷ್ಟ ಸ್ಥಳದಲ್ಲಿ ಇರಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಚಿರತೆ ಬೋನಿಗೆ ಬಿದ್ದಿಲ್ಲ. ಅಧಿಕಾರಿಗಳು ಕೂಡ ಚಿರತೆ ಹಿಡಿಯುವ ಸಾಹಸ ಮಾಡುತ್ತಿಲ್ಲ. ಕಳೆದ 2–3 ದಿನಗಳ ಹಿಂದೆ ಜೀರಿಗೆ ಬೆಟ್ಟ ಮತ್ತು ಕಿಲ್ಲನಕೇರಾ ಸೀಮೆ ವ್ಯಾಪ್ತಿಯಲ್ಲಿ ಚಿರತೆ ಓಡಾಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.