ಕಕ್ಕೇರಾ: ‘ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹ ಮಾಡಿ, ಸಾವಿರಾರು ಮಕ್ಕಳ ಪಾಲಿಗೆ ಆರಾಧ್ಯ ದೈವವಾಗಿದ್ದರು’ ಎಂದು ಹಿರಿಯಜೀವಿ ಚನ್ನಪ್ಪ ಹಿರೇಹಳ್ಳ ಮಾಸ್ತರ ಹೇಳಿದರು.
ಪಟ್ಟಣದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಡಾ.ಶಿವಕುಮಾರ ಸ್ವಾಮಿಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ರಾಜ್ಯದ ಪ್ರತಿ ಜಿಲ್ಲೆ ಹಾಗೂ ಹಳ್ಳಿಗಳಿಂದ ಹಲವಾರು ವಿದ್ಯಾರ್ಥಿಗಳಿಗೆ ವಸತಿ, ಶಿಕ್ಷಣ, ಪ್ರಸಾದವನ್ನು ನೀಡಿದ ಮಹಾ ಶಿವಶರಣ, ಕಾಯಕಜೀವಿ ಅವರು’ ಎಂದು ಹೇಳಿದರು.
ಡಾ.ಗುಡ್ನಾಳ, ನಂದಣ್ಣ ಅಸ್ಕಿ, ಶೇಖ ಸಿಸ್ಟರ್ ತಿಂಥಣಿ, ಮಹೇಶಕುಮಾರ ವಠಾರ, ಮಹಿಬೂಬ ನಾಶಿ, ಮಹಾಂತೇಶ, ಗಂಗಾಧರ ಪತ್ತಾರ ಸೌಮ್ಯ, ಸ್ವಾತಿ, ವಿರೇಶ ಸೇರಿದಂತೆ ಅನೇಕರು ಹಾಜರಿದ್ದರು.